ಉಡುಪಿ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಮಾತನಾಡಿ, ಸುಭದ್ರ ಪ್ರಜಾ ಪ್ರಭುತ್ವಕ್ಕೆ ಸರ್ವರ ಪಾಲ್ಗೊಳ್ಳುವಿಕೆ ಧ್ಯೇಯ ವಾಕ್ಯದಂತೆ ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವಲ್ಲಿ ಹಾಡುಗಳು, ಯಕ್ಷಗಾನ, ಜಾಥಾ ವಿವಿಧ ಅಕರ್ಷಣೆಗಳೊಂದಿಗೆ ಜನಜಾಗೃತಿ ಮೂಡಿಸಲಾಗುತ್ತಿದೆ. ಚುನಾವಣೆಗಾಗಿ ನೀಡುವ ರಜೆಯನ್ನು ಇನ್ನಿತರ ಕಾರ್ಯಕ್ಕೆ ಬಳಸದೆ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.