<p>ಹೊನ್ನಾಳಿ: ತಾಲ್ಲೂಕಿನ ಸುಕ್ಷೇತ್ರ ಸೊರಟೂರು ಗ್ರಾಮದ ಹನುಮಂತ ದೇವರು ಹಾಗೂ ತಿಮ್ಮಪ್ಪ ದೇವರ ರಥೋತ್ಸವ ಏ. 2ರಂದು ಶ್ರದ್ಧಾಭಕ್ತಿಯಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.</p>.<p>ಮಾರ್ಚ್ 30ರಂದು ದೇವರಿಗೆ ಕಂಕಣಧಾರಣೆ ಮಾಡಲಾಯಿತು. 31ರಂದು ಬೆಳಿಗ್ಗೆ ರಥದ ಕಳಸಾರೋಹಣ ಹಾಗೂ ರಾತ್ರಿ 10ಕ್ಕೆ ಪರವು, ಹೂವಿನ ರಥೋತ್ಸವ ನಡೆಯಿತು. ಏ. 1ರಂದು ರಾತ್ರಿ 1 ಗಂಟೆಗೆ ಹೂವಿನ ರಥೋತ್ಸವ ನಡೆಯಿತು.</p>.<p>ಏಪ್ರಿಲ್ 2ರಂದು ಮಧ್ಯಾಹ್ನ ಹನುಮಂತ ದೇವರ ರಥೋತ್ಸವ ನಡೆಯಿತು. ರಥೋತ್ಸವದಲ್ಲಿ ಹೊಂಡದ ರಾಮೇಶ್ವರ, ರಟ್ಟೆಹಳ್ಳಿ ತಾಲ್ಲೂಕಿನ ಬುಳ್ಳಾಪುರ ದುರ್ಗಮ್ಮ ದೇವಿ, ತುಗ್ಗಲಹಳ್ಳಿಯ ಬಸವಣ್ಣ ದೇವರು, ಮಾರಿಕೊಪ್ಪದ ಹಳದಮ್ಮ ದೇವಿ, ಜೀನಹಳ್ಳಿಯ ಮರಿಯಮ್ಮ ದೇವಿಯ ಉತ್ಸವಮೂರ್ತಿಗಳು ಪಾಲ್ಗೊಂಡಿದ್ದವು.</p>.<p>ರಥದಲ್ಲಿ ತಿಮ್ಮಪ್ಪ ದೇವರ ಹಾಗೂ ಹನುಮಂತ ದೇವರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುತ್ತಿದ್ದಂತೆ ಜೈಕಾರ ಮುಗಿಲು ಮುಟ್ಟಿತು. ಭಕ್ತರು ಉತ್ತುತ್ತಿ, ಮಂಡಕ್ಕಿ, ಮೆಣಸಿನಕಾಳು ಹಾಗೂ ರಥದ ಕಳಸಕ್ಕೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.</p>.<p>ರಥವನ್ನು ಮೂರು ಬಾರಿ ಹಿಂದೆ ಮುಂದಕ್ಕೆ ಚಲಿಸುವಂತೆ ಮಾಡಿ ನಂತರ ಎಳೆಯಲಾಯಿತು. ಉತ್ಸವದ ನಂತರ ಭಕ್ತರು ಪ್ರಸಾದ ಸೇವನೆ ಮಾಡಿದರು.</p>.<p>ಏಪ್ರಿಲ್ 3ರಂದು 3 ಗಂಟೆಗೆ ದಾಸಪ್ಪಗಳಿಂದ ಮಣೇವು ಆಡಿಸುವ ಕಾರ್ಯಕ್ರಮ ನಡೆಯಿತು. ನಂತರ ಓಕಳಿ ಆಡಿಸುವ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ ಗಳು ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260403-43-1507852613</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊನ್ನಾಳಿ: ತಾಲ್ಲೂಕಿನ ಸುಕ್ಷೇತ್ರ ಸೊರಟೂರು ಗ್ರಾಮದ ಹನುಮಂತ ದೇವರು ಹಾಗೂ ತಿಮ್ಮಪ್ಪ ದೇವರ ರಥೋತ್ಸವ ಏ. 2ರಂದು ಶ್ರದ್ಧಾಭಕ್ತಿಯಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.</p>.<p>ಮಾರ್ಚ್ 30ರಂದು ದೇವರಿಗೆ ಕಂಕಣಧಾರಣೆ ಮಾಡಲಾಯಿತು. 31ರಂದು ಬೆಳಿಗ್ಗೆ ರಥದ ಕಳಸಾರೋಹಣ ಹಾಗೂ ರಾತ್ರಿ 10ಕ್ಕೆ ಪರವು, ಹೂವಿನ ರಥೋತ್ಸವ ನಡೆಯಿತು. ಏ. 1ರಂದು ರಾತ್ರಿ 1 ಗಂಟೆಗೆ ಹೂವಿನ ರಥೋತ್ಸವ ನಡೆಯಿತು.</p>.<p>ಏಪ್ರಿಲ್ 2ರಂದು ಮಧ್ಯಾಹ್ನ ಹನುಮಂತ ದೇವರ ರಥೋತ್ಸವ ನಡೆಯಿತು. ರಥೋತ್ಸವದಲ್ಲಿ ಹೊಂಡದ ರಾಮೇಶ್ವರ, ರಟ್ಟೆಹಳ್ಳಿ ತಾಲ್ಲೂಕಿನ ಬುಳ್ಳಾಪುರ ದುರ್ಗಮ್ಮ ದೇವಿ, ತುಗ್ಗಲಹಳ್ಳಿಯ ಬಸವಣ್ಣ ದೇವರು, ಮಾರಿಕೊಪ್ಪದ ಹಳದಮ್ಮ ದೇವಿ, ಜೀನಹಳ್ಳಿಯ ಮರಿಯಮ್ಮ ದೇವಿಯ ಉತ್ಸವಮೂರ್ತಿಗಳು ಪಾಲ್ಗೊಂಡಿದ್ದವು.</p>.<p>ರಥದಲ್ಲಿ ತಿಮ್ಮಪ್ಪ ದೇವರ ಹಾಗೂ ಹನುಮಂತ ದೇವರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುತ್ತಿದ್ದಂತೆ ಜೈಕಾರ ಮುಗಿಲು ಮುಟ್ಟಿತು. ಭಕ್ತರು ಉತ್ತುತ್ತಿ, ಮಂಡಕ್ಕಿ, ಮೆಣಸಿನಕಾಳು ಹಾಗೂ ರಥದ ಕಳಸಕ್ಕೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.</p>.<p>ರಥವನ್ನು ಮೂರು ಬಾರಿ ಹಿಂದೆ ಮುಂದಕ್ಕೆ ಚಲಿಸುವಂತೆ ಮಾಡಿ ನಂತರ ಎಳೆಯಲಾಯಿತು. ಉತ್ಸವದ ನಂತರ ಭಕ್ತರು ಪ್ರಸಾದ ಸೇವನೆ ಮಾಡಿದರು.</p>.<p>ಏಪ್ರಿಲ್ 3ರಂದು 3 ಗಂಟೆಗೆ ದಾಸಪ್ಪಗಳಿಂದ ಮಣೇವು ಆಡಿಸುವ ಕಾರ್ಯಕ್ರಮ ನಡೆಯಿತು. ನಂತರ ಓಕಳಿ ಆಡಿಸುವ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ ಗಳು ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260403-43-1507852613</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>