ಪತ್ರಕರ್ತ ಅಗ್ನಿ ಶ್ರೀಧರ್, ‘ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಧರ್ಮಸ್ಥಳಕ್ಕೆ ಭೇಟಿ ನೀಡಿ, ಬಿಳಿ ವಸ್ತ್ರ ಹಾಕಿದ್ದರು. ಇದು ಮೃದು ಹಿಂದುತ್ವವಾದ. ಗಡುಸು ಹಿಂದುತ್ವವಾದ ವಿರುದ್ಧ ಹೋರಾಟ ಮಾಡಬಹುದು. ಆದರೆ, ಈ ಮೃದು ಹಿಂದುತ್ವವನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಎಂ.ಎಂ.ಕಲಬುರ್ಗಿ ಹಂತಕರು ಯಾರು ಎಂಬುದು ಕಾಂಗ್ರೆಸ್ನ ಮೂವರು ಸಚಿವರಿಗೆ ಗೊತ್ತಿದ್ದರೂ ಯಾವುದೇ ಲಾಭವಿಲ್ಲ ಎಂದು ಸುಮ್ಮನಿದ್ದಾರೆ’ ಎಂದರು.