ಜುಲೈ 22ರಂದು ಕನ್ನಡ ಪರೀಕ್ಷೆ ನಡೆದಿತ್ತು. ಅದರಲ್ಲಿ 19ನೇ ಪ್ರಶ್ನೆಗೆ ನೀಡಿರುವ ಆಯ್ಕೆಗಳೇ ಗೊಂದಲ ಉಂಟು ಮಾಡಿವೆ. ‘ಕಸರತ್ತು ಮಾಡಿ ಹತ್ತಿಪ್ಪತ್ತು ಕುದುರೆಗಳನ್ನು ಕೊಂದವರು ಯಾರು?’ ಎಂದು ಪ್ರಶ್ನೆ ಇದೆ. ಅದಕ್ಕೆ ‘ರಾಮ’, ‘ಭೀಮ’, ‘ಹನುಮ’, ‘ಚಡಗ’ ಎಂಬ ನಾಲ್ಕು ಉತ್ತರಗಳನ್ನು ನೀಡಲಾಗಿದೆ. ಆದರೆ ಈ ನಾಲ್ಕರಲ್ಲಿ ಸರಿ ಉತ್ತರ ಇಲ್ಲ. ಬಾಲ ಎನ್ನುವುದು ಸರಿಯಾದ ಉತ್ತರ ಎಂಬುದನ್ನು ವಿದ್ಯಾರ್ಥಿನಿ ತಿಳಿಸಿದ್ದಾಳೆ.