ದಾವಣಗೆರೆ: ಇಲ್ಲಿನ ಮಹಾನಗರ ಪಾಲಿಕೆ ಬಳಿಯ ಇಂದಿರಾ ಕ್ಯಾಂಟೀನ್ಗೆ ಬೆಳಿಗ್ಗೆ 9 ಗಂಟೆಗೆ ಉಪಾಹಾರಕ್ಕಾಗಿ ಹೋದರೆ ಉಪಾಹಾರ ಇಲ್ಲ. ಮಧ್ಯಾಹ್ನ 1.30ಕ್ಕೆ ಊಟಕ್ಕೆ ಹೋದರೆ ಊಟವೂ ಇಲ್ಲ. ಸುಮಾರು 450 ಮಂದಿ ತಿಂದಿದ್ದಾರೆ ಎಂಬ ಲೆಕ್ಕ ಮಾತ್ರ ಪುಸ್ತಕದಲ್ಲಿತ್ತು. ಇದರ ಮಾಹಿತಿ ಪಡೆದ ತಹಶೀಲ್ದಾರ್, ಮೇಯರ್, ಆರೋಗ್ಯ ಅಧಿಕಾರಿಗಳು ದಾಳಿ ಮಾಡಿ ಲೆಡ್ಜರ್, ಸಿಸಿಟಿವಿ ಕ್ಯಾಮೆರಾಗಳನ್ನು ವಶಪಡಿಸಿಕೊಂಡಿದ್ದಾರೆ.