ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 1027 ನೇ ದಿನವಾದ ಭಾನುವಾರ ಮಾತನಾಡಿದರು. ಮಹದಾಯಿ ಬಗ್ಗೆ ಪ್ರಧಾನಿಯವರು ಮಾತನಾಡಿದ್ದಾರೆ. ಈ ಮೊದಲೇ ನಾವು ಹಲವಾರು ಸಲ ಮನವಿ ಮಾಡಿದ್ದೇವೆ. ಆಗ ಇದಕ್ಕೆ ಸ್ಪಂದನೆ ದೊರೆಯಲಿಲ್ಲ. ಈಗ ಚುನಾವಣೆ ವೇಳೆ ಪ್ರಧಾನಿ ಮಹದಾಯಿಗೆ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ. ಇದರ ಬಗ್ಗೆ ಜನರು ಅವಲೋಕನ ಮಾಡುತ್ತಾರೆ. ಮಹದಾಯಿ ಹೋರಾಟ ನಿರಂತರ ಎಂದರು.