ಮುಜ್ಮಮಿಲ್ ಅವರುತಮ್ಮ ತಾಯಿ, ಪತ್ನಿ ಹಾಗೂ ಮಕ್ಕಳೊಂದಿಗೆ ದಾವಣಗೆರೆ ಆಜಾದ್ ನಗರದಲ್ಲಿನ ತಮ್ಮ ಮಾವನವರ ಶವಸಂಸ್ಕಾರಕ್ಕೆ ಬಂದಿದ್ದವೇಳೆ ಕಳ್ಳತನವಾಗಿದೆ. ಮಂಗಳವಾರ ಮನೆಗೆ ಬಂದು ನೋಡಿದಾಗ ಮನೆಯ ಬೀಗ ಮುರಿದು ಬೀರುವಿನಲ್ಲಿ ಇಟ್ಟಿದ್ದ ₹83,600 ಮೌಲ್ಯದ 25 ಗ್ರಾಂ ಬಂಗಾರದ ನೆಕ್ಲೇಸ್ ಹಾಗೂ ₹9,600 ಮೌಲ್ಯದ ಉಂಗುರ ಕಳವಾಗಿವೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.