ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವ ಸಂಸ್ಕಾರಕ್ಕೆ ಹೋಗಿದ್ದ ವೇಳೆ ಕಳವು

Last Updated 1 ಡಿಸೆಂಬರ್ 2020, 16:17 IST
ಅಕ್ಷರ ಗಾತ್ರ

ದಾವಣಗೆರೆ: ತಾಲ್ಲೂಕಿನ ಹಳೇಬಾತಿ ಗ್ರಾಮದ ಗುಡ್ಡದ ಕ್ಯಾಂಪ್‌ನಲ್ಲಿರುವ ಮುಜ್ಮಮಿಲ್ ಅವರ ಮನೆಯ ಬೀಗ ಮುರಿದ ಕಳ್ಳರು ₹ 93,200 ಮೌಲ್ಯದ ಬಂಗಾರದ ಆಭರಣಗಳನ್ನು ದೋಚಿದ್ದಾರೆ.

ಮುಜ್ಮಮಿಲ್ ಅವರುತಮ್ಮ ತಾಯಿ, ಪತ್ನಿ ಹಾಗೂ ಮಕ್ಕಳೊಂದಿಗೆ ದಾವಣಗೆರೆ ಆಜಾದ್ ನಗರದಲ್ಲಿನ ತಮ್ಮ ಮಾವನವರ ಶವಸಂಸ್ಕಾರಕ್ಕೆ ಬಂದಿದ್ದವೇಳೆ ಕಳ್ಳತನವಾಗಿದೆ. ಮಂಗಳವಾರ ಮನೆಗೆ ಬಂದು ನೋಡಿದಾಗ ಮನೆಯ ಬೀಗ ಮುರಿದು ಬೀರುವಿನಲ್ಲಿ ಇಟ್ಟಿದ್ದ ₹83,600 ಮೌಲ್ಯದ 25 ಗ್ರಾಂ ಬಂಗಾರದ ನೆಕ್ಲೇಸ್ ಹಾಗೂ ₹9,600 ಮೌಲ್ಯದ ಉಂಗುರ ಕಳವಾಗಿವೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT