ಪ್ರಜ್ಞೆ, ಕರುಣೆ ಮತ್ತು ಸಮತೆಯನ್ನಿಟ್ಟುಕೊಂಡು ನಾಗರಿಕ ಸಮಾಜದ ಕನಸು ಕಂಡು ಕರ್ಮಠ ಸಮಾಜಕ್ಕೆ ಪರ್ಯಾಯವನ್ನು ಮೊದಲು ಬುದ್ಧ ಕಟ್ಟಿದ. 12ನೇ ಶತನಾಮದಲ್ಲಿ ಅದೇ ದಾರಿಯಲ್ಲಿ ಬಂದ ಬಸವಣ್ಣ ಜಾತಿ ಮತ್ತು ಮೌಢ್ಯದ ವಿರುದ್ಧ ಪರ್ಯಾಯ ಸಮಾಜ ಕಟ್ಟಿದರು. ದಯೆ, ಸಹಬಾಳ್ವೆ, ಸಹಕಾರ, ಕಾಯಕ, ದಾಸೋಹ, ವ್ಯಕ್ತಿ ಗೌರವ ಮುಂತಾದ ಮೌಲ್ಯಗಳೇ ಇದಕ್ಕೆ ಆಧಾರವಾಗಿಟ್ಟುಕೊಂಡರು ಎಂದರು.