‘ದಾವಣಗೆರೆಯ ವಿದ್ಯುತ್ ಕಂಪನಿಯೊಂದರ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದು, ಜಗಳೂರು ತಾಲ್ಲೂಕಿನಲ್ಲಿ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಕೊಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.ನಾಗರಾಜು ಗೌಡ ಹಾಗೂ ಜಯಸಿಂಹ ಎಂಬುವವರು ನನ್ನ ಪತಿಗೆ ಕಿರುಕುಳ ನೀಡುತ್ತಿದ್ದರು. ಜಾತಿ ನಿಂದನೆಯೂ ಮಾಡುತ್ತಿದ್ದರು. ಇದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು. ಕಿರುಕುಳದ ಬಗ್ಗೆ ಡೆತ್ನೋಟ್ನಲ್ಲಿಯೂ ಬರೆದಿಟ್ಟಿದ್ದಾರೆ’ ಎಂದು ಭುವನೇಶ್ವರ ಪತ್ನಿ ಚೇತನ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.