‘ನನ್ನ ಮನೆ ಬೀಳುವ ಹಂತದಲ್ಲಿದ್ದು ಆಶ್ರಯ ಮನೆ ಯೋಜನೆಯಡಿ ಮನೆ ನೀಡುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮತ್ತು ಗ್ರಾಮಪಂಚಾಯತಿ ಸದಸ್ಯರಿಗೆ ಮನವಿ ಮಾಡಿದ್ದೆ. ಕೊಡುತ್ತೇವೆಂದು ಭರವಸೆ ನೀಡಿದ್ದರು. ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳಿಗೂ ಮನವಿ ಸಲ್ಲಿಸಿದ್ದೆ. ಎಷ್ಟೇ ಪ್ರಯತ್ನಿಸಿದರೂ ಮನೆ ನೀಡಲ್ಲಿಲ್ಲ. ಈಗ ಮನೆ ಕಳೆದುಕೊಂಡಂತಾಗಿದೆ ಎಂದು ರತ್ನಮ್ಮ ಅಳಲು ತೋಡಿ ಕೊಂಡರು.