ಮುಖ್ಯ ಶಿಕ್ಷಕ ಟೀಕಪ್ಪ ಮಾತನಾಡಿ, ‘ಇಲ್ಲಿ ಬಹಳ ಸಂಖ್ಯೆಯ ಮಕ್ಕಳು ಇರುವುದರಿಂದ ಅಂತರ ಕಾಯ್ದುಕೊಂಡು ಮಕ್ಕಳನ್ನು ಕುಳ್ಳರಿಸಲು ಕೊಠಡಿ ಸಮಸ್ಯೆ ಇದೆ. ಕರ್ನಾಟಕ ಪಬ್ಬಿಕ್ ಶಾಲೆಯ ಆವರಣದಲ್ಲಿ ಈಗಾಗಲೇ ಕಾಮಗಾರಿ ಮುಗಿದಿರುವ ಹೊಸ ಕಟ್ಟಡಕ್ಕೆ ಕಾಲೇಜು ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಿದರೆ ಕೊಠಡಿ ಸಮಸ್ಯೆ ಹೊಗಲಾಡಿಸಬಹುದು. ಇರುವ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಿ ಬೋಧನೆ ಮಾಡಲಾಗುವುದು’ ಎಂದು ತಿಳಿಸಿದರು.