ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗವಾನಿ ಕಳವು: ಐವರ ಬಂಧನ

Last Updated 28 ಜುಲೈ 2020, 16:51 IST
ಅಕ್ಷರ ಗಾತ್ರ

ದಾವಣಗೆರೆ: ಎಲೆಬೇತೂರಿನಲ್ಲಿ ಬಾಲರಾಜು ಅವರು ರಸ್ತೆ ವಿಸ್ತರಣೆಗಾಗಿ ಎರಡು ವರ್ಷಗಳ ಹಿಂದೆ ಕಡಿದು ಜಮೀನಿನ ಶೆಡ್‌ನಲ್ಲಿ ಇಟ್ಟಿದ್ದರು. ಅದು ಜುಲೈ 4ರಂದು ರಾತ್ರಿ ಕಳವಾಗಿತ್ತು. ಇದೀಗ ಐವರು ಆರೋಪಿಗಳನ್ನು ಪತ್ತೆ ಹಚ್ಚಿರುವ ಗ್ರಾಮಾಂತರ ಪೊಲೀಸರು ₹ 1 ಲಕ್ಷ ಮೌಲ್ಯದ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ನಾಗರಕಟ್ಟೆ ಗ್ರಾಮದ ಮಂಜನಾಯ್ಕ್‌, ನಾಗೇಶನಾಯ್ಕ್, ಮಂಜನಾಯ್ಕ್, ಸುರೇಶನಾಯ್ಕ್, ಲೋಕೇಶನಾಯ್ಕ್ ಬಂಧಿತ ಆರೋಪಿಗಳು. ಮರದ ರೀಪುಗಳನ್ನು ವಿವಿಧ ಕಡೆ ಮಾರಾಟ ಮಾಡಿದ್ದರು. ಎಸ್‌ಪಿ ಹನುಮಂತರಾಯ, ಎಎಸ್‌ಪಿ ರಾಜೀವ್‌, ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಬಿ.ಮಂಜುನಾಥ, ಪಿಎಸ್ಐಗಳಾದ ಸಂಜೀವ್‌ ಕುಮಾರ್, ಎಂ.ಪಾಷಾ, ಪ್ರವೀಣ್, ಬಸವರಾಜ ಬಿರಾದರ್, ಎ.ಎಸ್.ಐ ಜೋವಿತ್‌ರಾಜ್ ಸಿಬ್ಬಂದಿ ರಾಜು ಲಮಾಣಿ, ನಾಗರಾಜಯ್ಯ, ಅರುಣಕುಮಾರ ಕುರುಬರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT