ದಿಂಡದಹಳ್ಳಿಯ ಚಂದ್ರಪ್ಪ ಅವರ ಮಗ ಪ್ರವೀಣ್ (17) ಮೃತಪಟ್ಟ ವಿದ್ಯಾರ್ಥಿ. ಕಲಾ ವಿಭಾಗದ ಪ್ರಥಮ ಪಿಯು ವಿದ್ಯಾರ್ಥಿ ಆಗಿರುವ ಪ್ರವೀಣ್ ಮಂಗಳವಾರ ಕಾಲೇಜಿಗೆಂದು ಮನೆಯಿಂದ ಬಂದಿದ್ದ. ಬಳಿಕ ಐದಾರು ಮಂದಿ ಸ್ನೇಹಿತರ ಜತೆಗೆ ಮಾಯಕೊಂಡ ಕೆರೆಗೆ ಸ್ನಾನಕ್ಕೆ ತೆರಳಿದ್ದ. ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ಐ ಕಿಲೋವತಿ ತಿಳಿಸಿದ್ದಾರೆ.