ಅನುಮಾಗೊಂಡ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಪತಿ ಪತ್ನಿಯರ ಮಧ್ಯೆ ಆಸ್ತಿ ಹಾಗೂ ಹಣದ ವಿಚಾರವಾಗಿ ವೈಮನಸ್ಸು ಇತ್ತು. ಸಿದ್ದವೀರಪ್ಪ ದ್ವಿತೀಯ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದ ತನ್ನ ಮಗ ವಿಕಾಸ್, ಮಾವ ರಾಜಪ್ಪ ಹಾಗೂ ಶೇಖರಪ್ಪ ಅವರ ಸಹಾಯದೊಂದಿಗೆ ಚಾನಲ್ ಬಳಿ ಸಿದ್ದಮ್ಮನನ್ನು ಕರೆಸಿಕೊಂಡು ಹಲ್ಲೆ ಮಾಡಿ ಕೊಂದ ವಿಷಯ ಗೊತ್ತಾಗಿದೆ. ಹೆಣವನ್ನು ಚಾನೆಲ್ಗೆ ಎಸೆದಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ತನಿಖೆಗಾಗಿ ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಸಿಪಿಐ ಮಂಜುನಾಥ್, ಹದಡಿ ಪಿಎಸ್ಐ ಪ್ರಸಾದ್, ಎ.ಎಸ್ಐ ಚನ್ನವೀರಪ್ಪ ಸಿಬ್ಬಂದಿ ಮಂಜುನಾಥ, ಕರಿಬಸಪ್ಪ ಶಿವಕುಮಾರ್, ವೀರಭದ್ರಪ್ಪ, ಅಣ್ಣಯ್ಯ, ಶ್ರೀನಿವಾಸ್ ತಂಡದಲ್ಲಿ ಇದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ರಾಜೀವ್ ಬಹುಮಾನ ಘೋಷಿಸಿದ್ದಾರೆ.