ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಯುವ ಸಂಸತ್ತು (ಅಣಕು ಸಂಸತ್ತು) ಸ್ಪರ್ಧೆಯ ಅಧಿವೇಶನದಲ್ಲಿ ನಡೆದ ವಾದ, ಪ್ರತಿವಾದಗಳ ತುಣುಕು ಇವು. ಮುಖ್ಯಕಾರ್ಯದರ್ಶಿ ಕಲಾಪದ ವರದಿ ಮಂಡಿಸಿದರು. ಸಂತಾಪ ಸೂಚನೆ, ಪ್ರಶ್ನೋತ್ತರ, ಶೂನ್ಯವೇಳೆ, ಗಮನ ಸೆಳೆಯುವ ಸೂಚನೆಗಳು, ಜರೂರು ವಿಷಯದ ಬಗ್ಗೆ ಚರ್ಚೆ, ವಿಧೇಯಕಗಳ ಮಂಡನೆ, ಶಾಸನ ರಚನೆಗಳು ನಡೆದವು.