ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮ ಪಂಚಾಯತಿ ಪಿಡಿಒ ವಿಜಯ್ ಗೌಡ ಸಿಕ್ಕಿಬಿದ್ದ ಅಧಿಕಾರಿ. ಇ–ಸ್ವತ್ತು ಮಾಡಿಕೊಡಲುಯರಗುಂಟೆ ಗ್ರಾಮದ ನಿವಾಸಿ ಹಾಲೇಶಪ್ಪ ಅವರಲ್ಲಿ ₹ 10 ಸಾವಿರ ಬೇಡಿಕೆ ಇಟ್ಟಿದ್ದರು. ಈ ವಿಚಾರವನ್ನು ಹಾಲೇಶಪ್ಪ ಭ್ರಷ್ಟಾಚಾರ ನಿಗ್ರಹ ದಳದ ಗಮನಕ್ಕೆ ತಂದಿದ್ದರು. ಹಾಲೇಶಪ್ಪ ಅವರಿಂದ ಪಿಡಿಒ ವಿಜಯ ಗೌಡ ಬುಧವಾರ ಹಣ ಪಡೆಯುತ್ತಿರುವಾಗಲೇ ಎಸಿಬಿಯವರು ದಾಳಿ ನಡೆಸಿದ್ದಾರೆ.