ಆನಂತರ ಸಂಧಾನ ಸಭೆ ನಡೆದಿದ್ದು, ಸೈಯದ್ ಸೈಫುಲ್ಲಾ ಅವರು ಈ ಸಭೆಗೆ ಹಾಜರಾಗಿದ್ದರು. ಈ ವೇಳೆ ಹಮಾಲಿಗಳು ಹಾಗೂ ವರ್ತಕರು ಸೈಫುಲ್ಲಾ ವಿರುದ್ಧ ಕೆಲವು ಆರೋಪಗಳನ್ನು ಮಾಡಿದರು. ಸಭೆಯಲ್ಲಿ ವಾದ–ಪ್ರತಿವಾದಗಳು ನಡೆದು ತಳ್ಳಾಟವಾಗಿ ಸಭೆಯಲ್ಲಿ ಪ್ರಕ್ಷುಬ್ದ ವಾತಾವರಣ ಉಂಟಾಯಿತು. ಆಗ ಸೈಫುಲ್ಲಾ ಅವರು ಸಭೆಯಿಂದ ಹೊರಗೆ ಹೋಗಲು ಯತ್ನಿಸಿದರು. ಆದರೆ ಖರೀದಿದಾರರು, ರೈತರು, ಹಮಾಲರು ಸೈಫುಲ್ಲಾ ಅವರನ್ನು ಬಿಡಲಿಲ್ಲ. ಬಳಿಕ ಪೊಲೀಸರು ಎಪಿಎಂಸಿಯ ಕೊಠಡಿಯಲ್ಲಿ ಸೈಫುಲ್ಲಾ ಅವರನ್ನು ಕೂಡಿ ಹಾಕಿ ರಕ್ಷಿಸಿದರು. ಅವರನ್ನು ಹೊರಗೆ ಕಳುಹಿಸುವಂತೆ ರೈತರು, ಹಮಾಲರು ಪಟ್ಟು ಹಿಡಿದರು. ಕೊನೆಗೆ ಸೈಫುಲ್ಲಾ ಅವರು ಹೊರ ಬಂದು ಕ್ಷಮೆ ಯಾಚಿಸಿದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು.