ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನವಿರು ಪ್ರೇಮಕಥೆ, ಕುಟುಂಬದ ಮೌಲ್ಯ ಹೇಳುವ ಚಿತ್ರ ಇದಾಗಿದ್ದು, ಬೆಂಗಳೂರು, ಕೇರಳ, ಗೋವಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಿರಿಯ ನಟರಾದ ಅನಿವಾಶ್, ರಮೇಶ್ ಭಟ್, ಮಜಾಭಾರತದ ಪವನ್ ಸೇರಿ ಹಲವರ ತಾರಾಗಣ ಇದೆ. ಜೆಸ್ಸಿ ಗಿಫ್ಟ್ ಚಿತ್ರಕ್ಕೆ ಸಂಗೀತ ನೀಡಿದ್ದು, ಕವಿರಾಜ್, ನಾಗೇಂದ್ರ ಪ್ರಸಾದ್ರ ಸಾಹಿತ್ಯ ಇದೆ. ಕೆ.ಜಿ.ಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ’ ಎಂದು ಹೇಳಿದರು.