ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಿಬಸವೇಶ್ವರ ಸ್ವಾಮಿಯ ರಥ ಎಳೆದ ಮಹಿಳೆಯರು

Last Updated 3 ಡಿಸೆಂಬರ್ 2021, 6:07 IST
ಅಕ್ಷರ ಗಾತ್ರ

ಯರಗುಂಟೆ (ದಾವಣಗೆರೆ):‌ ಯರಗುಂಟೆಯಲ್ಲಿ ಗುರು ಕರಿಬಸವೇಶ್ವರ ಸ್ವಾಮಿಯ ರಥವನ್ನು ಮಹಿಳೆಯರೇ ಎಳೆಯುವ ಮೂಲಕ ಪ್ರತಿ ವರ್ಷದ ವೈಶಿಷ್ಟ್ಯ ಗುರುವಾರವೂ ಮುಂದುವರಿಯಿತು.

ಗುರು ಕರಿಬಸವೇಶ್ವರ ಸ್ವಾಮಿ ಗದ್ದಿಗೆ ಮಠದ ಪರಮೇಶ್ವರ ಸ್ವಾಮೀಜಿ ಇದೇ ಸಂದರ್ಭದಲ್ಲಿ ಮಾತನಾಡಿ, ‘ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದುವರಿದಿದ್ದಾರೆ. ಸಂಸಾದರ ನೊಗ ಎಳೆಯುತ್ತಿರುವ ಜತೆಗೆ ಸಾಮಾಜಿಕ ಕ್ಷೇತ್ರಗಳನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. 2028ರ ವೇಳೆಗೆ ಈ ರಾಜ್ಯದಲ್ಲಿ ಮಹಿಳೆಯೊಬ್ಬರು ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ’ ಎಂದು ಭವಿಷ್ಯ ನುಡಿದರು.

ಪ್ರತಿವರ್ಷ ಮಹಿಳೆಯರಿಂದಲೇ ರಥೋತ್ಸವ ಎಳೆಸುವ ಕಾರ್ಯಕ್ರಮ
ವನ್ನು ಸಾಂಗವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇದು ಗುರು ಕರಿಬಸವೇಶ್ವರರ ಆಶಯವಾಗಿತ್ತು. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವು
ದರ ಜೊತೆಗೆ ಮಹಿಳೆಯರಿಗೂ ಸಮಾನತೆಯನ್ನು ನೀಡಿದ ಕೀರ್ತಿ ಗುರು ಕರಿಬಸವೇಶ್ವರರಿಗೆ ಸಲ್ಲುತ್ತದೆ ಎಂದರು.

ಚನ್ನಗಿರಿ ಹಿರೇಮಠದ ಕೇದಾರ
ಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ‘ಕರಿಬಸವೇಶ್ವರರು ಕೇವಲ ದೆವ್ವ ಭೂತಗಳನ್ನು ಬಿಡಿಸಲಿಲ್ಲ. ಭಕ್ತರ ಮನಸಿನಲ್ಲಿ ಗಾಢವಾಗಿದ್ದ ಅಜ್ಞಾನ, ಅಂಧಾನುಕರಣೆಗಳನ್ನು ದೂರ ಮಾಡಿದರು. ಮಹಿಳೆಯರಿಂದ ರಥೋತ್ಸವ ಎಳೆಸುವ ಮೂಲಕ ಹೊಸ ಚಿಂತನೆಗಳಿಗೆ ಸಮಾಜವನ್ನು ಕೊಂಡೊಯ್ದರು’ ಎಂದರು.

ಹಾಲಸ್ವಾಮಿ ವಿರಕ್ತಮಠದ ಡಾ.ಬಸವಜಯಚಂದ್ರ ಸ್ವಾಮೀಜಿ, ‘ಸೇವಾ ಮನೋಭಾವ ಇರುವವರು ಮಾತ್ರ ನಿಜವಾದ ಭಕ್ತರಾಗಲು ಸಾಧ್ಯ. ಆದರೆ ಇಂದು ಅಂಥ ಮನೋಭಾವ ಕಡಿಮೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ರಥೋತ್ಸವದಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT