2018ರ ಮೇ 31ರಂದು ಚನ್ನಗಿರಿ ತಾಲ್ಲೂಕಿನ ಯಲೋದಹಳ್ಳಿ ಪ್ರಕಾಶ್ ಅವರ ಕೋಳಿ ಫಾರ್ಮ್ ಎದುರು ಒಂದು ಟಗರು, ಮೇಕೆ, ಮೇಕೆ ಮರಿಗಳನ್ನು ಕಟ್ಟಿ ಹಾಕಿದ್ದರು. ಅವುಗಳನ್ನು ಕಳವು ಮಾಡಿ ಒಯ್ಯುವಾಗ ಪ್ರಕಾಶ್ ಪ್ರತಿರೋಧ ತೋರಿದ್ದರು. ಆಗ ದೊಣ್ಣೆಯಿಂದ ಹಲ್ಲೆ ನಡೆಸಿ, ಚಾಕು ತೋರಿಸಿ ಬೆದರಿಸಿ ಅಪರಾಧಿಗಳು ಟಗರು, ಮೇಕೆಗಳನ್ನು ಬೈಕ್ಗಳಲ್ಲಿ ಕೊಂಡೊಯ್ದಿದ್ದರು. ದಾರಿ ಮಧ್ಯೆ ಸಂತೇಬೆನ್ನೂರು ಪಿಎಸ್ಐ ಮಲ್ಲಿಕಾರ್ಜುನ್ ಮತ್ತು ಪೊಲೀಸರು ವಾಹನ ತಪಾಸಣೆ ನಡೆಸುವಾಗ ಸಿಕ್ಕಿಬಿದ್ದಿದ್ದರು. ಎರಡು ಬೈಕ್ಗಳು ಕೂಡ ಕಳವು ಮಾಡಿದ್ದವು ಎಂಬುದು ಆಗ ಗೊತ್ತಾಗಿತ್ತು. ಪ್ರಕರಣವನ್ನು ಬಸವಾಪಟ್ಟಣ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಪಿಎಸ್ಐ ಮೇಘರಾಜ್, ಸಿಪಿಐ ಗಜೇಂದ್ರಪ್ಪ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.