ಕಾಂಗ್ರೆಸ್ ಸೇರಿದಾಗ ದಿನದಿಂದಲೂ ಪ್ರೋತ್ಸಾಹ, ಬೆಂಬಲ ನೀಡುತ್ತಾ ಬಂದಿದ್ದಾರೆ. ನಾನು ಮುಖ್ಯಮಂತ್ರಿ ಆಗಲು ಜನರೇ ಕಾರಣಕರ್ತರು ಎಂಬುದನ್ನು ನೆನೆದುಕೊಳ್ಳುತ್ತೇನೆ. ಬಂಡೆಯಂತೆ ಸಹಕಾರ ನೀಡಿದ್ದನ್ನು ಮರೆಯಲಾಗದು. ಸಕ್ರಿಯ ರಾಜಕಾರಣದಲ್ಲಿ ಐವತ್ತು ವರ್ಷಗಳ ಕಾಲ ಜನರೊಂದಿಗೆ ಇದ್ದೇನೆ. 1978ರಲ್ಲಿ ತಾಲ್ಲೂಕು ಬೋರ್ಡ್ ಮೆಂಬರ್, 1983ರಲ್ಲಿ ಶಾಸಕ, 1985ರಲ್ಲಿ ಮಂತ್ರಿಯಾದೆ. ಜನಪರವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಜನಶಕ್ತಿಯೇ ದೊಡ್ಡದು. ಜನರ ಆಶೀರ್ವಾದ ಇಲ್ಲದಿದ್ದರೆ ದೀರ್ಘಕಾಲದ ರಾಜಕೀಯ ಸೇವೆ ಮಾಡಲು ಸಾಧ್ಯವಿಲ್ಲ. ಕನ್ನಡ ನಾಡಿನ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ನಾಡಿನ ಸಮಸ್ತ ಜನರಿಗೆ ಧನ್ಯವಾದ ಹೇಳುತ್ತೇನೆ. ದೈಹಿಕ ಮಾನಸಿಕವಾಗಿ ಸದೃಢವಾಗಿರುವ ತನಕ ಸಕ್ರಿಯ ರಾಜಕಾರಣ ದಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.