‘ಸಂವಿಧಾನದ ಉಲ್ಲೇಖ, ಸುಪ್ರೀಂಕೋರ್ಟ್ ಉಲ್ಲೇಖಗಳು, ತೀರ್ಪುಗಳನ್ನು ಗಮನಿಸಿಕೊಂಡು ಶಾಶ್ವತವಾಗಿ ಒಬಿಸಿಗೆ ಯಾರು ಸೇರಬೇಕು ಎಂಬುದನ್ನು ಅಧ್ಯಯನ ಮಾಡಬೇಕು. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಯಾರು ಹಿಂದುಳಿದ್ದಾರೆ ಎಂಬುದನ್ನು ತಿಳಿಯಬೇಕು. ಹಿಂದುಳಿದ ಆಯೋಗಗಳಿವೆ. ಎಸ್ಸಿ, ಎಸ್ಟಿ ಆಯೋಗಗಳಿಂದ ಮೊದಲು ಶಿಫಾರಸು ಆಗಬೇಕು. ಬಳಿಕ ಅವುಗಳ ಪರಾಮರ್ಶೆ ಮಾಡಬೇಕಾಗುತ್ತದೆ’ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.