ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನ್‌ ನೋಡಲು ನೂಕುನುಗ್ಗಲು: ಲಘು ಲಾಠಿ ಪ್ರಹಾರ

Last Updated 1 ಸೆಪ್ಟೆಂಬರ್ 2020, 8:16 IST
ಅಕ್ಷರ ಗಾತ್ರ

ದಾವಣಗೆರೆ: ನಟ ದರ್ಶನ್‌ ಅವರನ್ನು ನೋಡಲು ಅಭಿಮಾನಿಗಳು ಇಲ್ಲಿನ ಬಾಪೂಜಿ ಅತಿಥಿಗೃಹದ ಬಳಿ ಭಾರಿ ಸಂಖ್ಯೆಯಲ್ಲಿ ನೆರೆದಿದ್ದರಿಂದ ನೂಕು ನುಗ್ಗಲು ಉಂಟಾಯಿತು. ಅಭಿಮಾನಿಗಳು ಗೇಟು ದಾಟಿ ಮುಂದೆ ಬರಲು ಪ್ರಯತ್ನಿಸಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಭಾನುವಾರ ರಾತ್ರಿ ಶಾಮನೂರು ಮನೆಗೆ ದರ್ಶನ್‌ ಬಂದಾಗಲೂ ಇದೇ ರೀತಿ ನೂಕುನುಗ್ಗಲು ಉಂಟಾಗಿತ್ತು. ಆಗಲೂ ಲಾಠಿ ರುಚಿ ತೋರಿಸಿ ನಿಯಂತ್ರಿಸಲಾಗಿತ್ತು.

ಸೋಮವಾರ ಗೇಟ್‌ ನೂಕಿ ಒಳಬಂದಾಗ ಪೊಲೀಸರು ಲಾಠಿ ಬೀಸಿದರು. ಒಂದು ಕ್ಷಣ ಜನರು ಹಿಂದಕ್ಕೆ ಸರಿದರು. ಬಳಿಕ ವಿ ವಾಂಟ್‌ ಜಸ್ಟೀಸ್‌ ಎಂದು ಕೂಗುತ್ತಾ ನುಗ್ಗುವ ಪ್ರಯತ್ನ ಮಾಡಿದರು.

ಈ ಮಧ್ಯೆ ಮಹಿಳೆಯೊಬ್ಬರು ‘ದರ್ಶನ್‌ನನ್ನು ನೋಡಲೇಬೇಕು’ ಎಂದು ಪಟ್ಟು ಹಿಡಿದಿದ್ದರಿಂದ ಪೊಲೀಸರಿಗೆ ಅವರನ್ನು ಹೊರಗೆ ಕಳುಹಿಸುವುದು ಬಹಳ ಕಷ್ಟವಾಯಿತು. ಸುಮಾರು ಹೊತ್ತು ವಾಗ್ವಾದ ನಡೆದ ಬಳಿಕ ಮಹಿಳೆ ಗೇಟಿನ ಹೊರಗೆ ಹೋದರು.

ಎರಡು ಕುದುರೆ ಕೊಡುಗೆ: ಕಲ್ಲೇಶ್ವರ ರೈಸ್‌ ಮಿಲ್‌ ಬಳಿ ಎಸ್‌.ಎಸ್‌. ಮಲ್ಲಿಕಾರ್ಜುನ ಸಾಕಿದ್ದ ಕುದುರೆಗಳಲ್ಲಿ ದರ್ಶನ್‌ಗೆ ಇಷ್ಟವಾದ ಎರಡು ಕುದುರೆಗಳನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಯಿತು. ದರ್ಶನ್‌ ಸೋಮವಾರ ಕೂಡ ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿಯಲ್ಲಿ ಶಾಮನೂರು ತೋಟದಲ್ಲಿ ಕುರಿ, ಆಕಳು, ಆಡುಗಳ ಜತೆಗೆ ಕಾಲ ಕಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT