ಹಿರೇಕಂದವಾಡಿಯ ಗ್ರಾಮದ ತೋಟದಲ್ಲಿ ಅಡಿಕೆ ಕೊಯ್ದು ಟ್ರ್ಯಾಕ್ಟರ್ನಲ್ಲಿ ತುಂಬಿಕೊಂಡು ವೇಗವಾಗಿ ಬರುತ್ತಿರುವ ವೇಳೆ ಚಾಲಕ ಹಂಪ್ಸ್ ಮೇಲೆ ಹತ್ತಿಸಿದ ಪರಿಣಾಮ ಟ್ರೇಲರ್ ಪಲ್ಟಿಯಾಗಿ ಕೆಳಗೆ ಬಿದ್ದು, ಗಾಯಗೊಂಡಿದ್ದ ಉಮೇಶ್ ಬಾಬು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮಾಯಕೊಂಡ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.