ಹೊನ್ನಾಳಿ: ತಾಲೂಕಿನ ಎಚ್.ಗೋಪಗೊಂಡನಹಳ್ಳಿ ಗ್ರಾಮದ ಕೆರೆಯಲ್ಲಿ ಹಸುಗಳ ಮೈತೊಳೆಯಲು ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಶುಕ್ರವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.
ಗ್ರಾಮದ ಕೆ.ರವಿ ಅವರ ಪುತ್ರ ಮನು ಅಲಿಯಾಸ್ ಮನೋಜ್ (13) ಹಾಗೂ ಗಣೇಶಪ್ಪ ಅವರ ಮಗ ಮಹೇಶ್ (13) ಮೃತಪಟ್ಟವರು. ಇವರಿಬ್ಬರು ಗ್ರಾಮದ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.
ಮಧ್ಯಾಹ್ನ 12.45ರ ವೇಳೆಯಲ್ಲಿ ಹಸುಗಳಿಗೆ ನೀರುಣಿಸಿ ಮೈತೊಳೆಯಲು ಹೋದಾಗ ಆಕಸ್ಮಿಕವಾಗಿ ಬಿದ್ದು, ಈಜು ಬಾರದೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ್ತುಷಾರ್ ಬಿ.ಹೊಸೂರ, ಸಿಪಿಐ ದೇವರಾಜ್ ಹಾಗೂ ಪಿಎಸ್ಐ ತಿಪ್ಪೇಸ್ವಾಮಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಬೇಲಿಮಲ್ಲೂರಿನ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಹರಿಹರದ ಈಜುಗಾರರು ಕಾರ್ಯಾಚರಣೆ ನಡೆಸಿ ಬಾಲಕರ ಮೃತದೇಹಗಳನ್ನು ಹೊರ ತೆಗೆದರು.
ಕುಟುಂಬಸ್ಥರ ರೋದನೆ:ತಮ್ಮ ಮಕ್ಕಳು ನೀರಿನಿಲ್ಲಿ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಕೆರೆ ಬಳಿ ಪೋಷಕರು, ಸಂಬಂಧಿಕರ ರೋದನೆ ಹೇಳತೀರದು.