ಹೊನ್ನಾಳಿ: ತಾಲ್ಲೂಕಿನ ಎಚ್. ಗೋಪಗೊಂಡನಹಳ್ಳಿ ಗ್ರಾಮದ ರೈತ ಸಿದ್ದಪ್ಪ ಪುಟ್ಟಪ್ಪ ಎಂಬುವವರಿಗೆ ಸೇರಿದ ಎರಡು ಎತ್ತುಗಳು ರಾಸಾಯನಿಕ ಸಿಂಪಡಿಸಿದ ಮೇವನ್ನು ತಿಂದು ಮೃತಪಟ್ಟಿವೆ.
ಮೆಕ್ಕೆಜೋಳದ ರಾಶಿಗೆ ಹುಳು ಹತ್ತಬಾರದು ಎಂಬ ಕಾರಣಕ್ಕಾಗಿ ಮೆಕ್ಕೆಜೋಳಕ್ಕೆ ರಾಸಾಯನಿಕ ಸಿಂಪಡಿಸಲಾಗಿತ್ತು. ಜೋಳದ ಸೊಪ್ಪೆಯನ್ನು ಎತ್ತುಗಳು ತಿಂದು ಮೃತಪಟ್ಟಿವೆ. ಎಂದು ಸಿದ್ದಪ್ಪ ತಿಳಿಸಿದರು.
ಹತ್ತೂರಿನ ಪಶು ವೈದ್ಯ ಡಾ. ಹರೀಶ್ ಸ್ಥಳಕ್ಕೆ ಬಂದು ಪಂಚನಾಮೆ ನಡೆಸಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಚೆಲುವರಾಜ್ ಇಲಾಖೆಗೆ ವರದಿ ನೀಡಿದ್ದಾರೆ. ₹ 80 ಸಾವಿರ ಮೌಲ್ಯದ ಎತ್ತುಗಳನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದೆ ಎಂದು ಸಿದ್ದಪ್ಪ ಅಳಲು ತೋಡಿಕೊಂಡಿದ್ದಾರೆ.