ಸಂಚಾರ ಯೋಗ್ಯವಾಗಿದ್ದ ಹೆದ್ದಾರಿಗಳಲ್ಲಿ ರಾತ್ರೋ ರಾತ್ರಿ ಕಾಮಗಾರಿಗಾಗಿ ಹತ್ತಾರು ಅಡಿ ಆಳದ, ಮೂರ್ನಾಲ್ಕು ಅಡಿ ಅಗಲದ ಗುಂಡಿ ತೆಗೆದು ಪೈಪ್ ಅಳವಡಿಸುತ್ತಾರೆ. ನಂತರ ಕಾಲುವೆಗಳನ್ನು ದುರಸ್ತಿ ಮಾಡದೇ ಕೇವಲ ಮಣ್ಣು ತುಂಬಿ ಗುತ್ತಿಗೆದಾರರು ಅಧಿಕಾರಿಗಳು ನಾಪತ್ತೆಯಾಗುತ್ತಾರೆ. ಸದರಿ ರಸ್ತೆಯನ್ನು ಮುಂಚಿನ ಸ್ಥಿತಿಗೆ ಬರುವಂತೆ ಡಾಂಬರೀಕರಣ ಮಾಡದ್ದರಿಂದ ವಾಹನ, ಜನರ ಸಂಚಾರಕ್ಕೆ ತೊಂದರೆಯಾಗುತ್ತದೆ. ಅಪಘಾತಗಳು ನಡೆದು ಪ್ರಾಣ ಹಾನಿಯೂ ಆಗುತ್ತಿರುತ್ತದೆ. ಇಂತಹ ಘಟನೆಗಳು ನಡೆದಾಗ ಸಾರ್ವಜನಿಕರು ಲೋಕೋಪಯೋಗಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ ಎಂಬುದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ದೂರು.