ದಾವಣಗೆರೆಯಲ್ಲೂ ಆಗಸ್ಟ್ 12ರಂದು ಬೆಳಿಗ್ಗೆ 11ಕ್ಕೆ ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಲಾಗುವುದು. ಕಳೆದ ಸಾಲಿಗಿಂತ ಎಫ್ಆರ್ಪಿಯನ್ನು ಕೇವಲ ₹ 150 ಹೆಚ್ಚಿಸಲಾಗಿದೆ. ಆದರೆ ಇದು ಕೇಂದ್ರದ ಕಣ್ಣೊರೆಸುವ ತಂತ್ರ. ಕಟಾವು ಸೇರಿ ಕಬ್ಬಿನ ಉತ್ಪಾದನಾ ವೆಚ್ಚ ಪ್ರತಿ ಟನ್ಗೆ ₹ 500 ಗಿಂತಲೂ ಹೆಚ್ಚಾಗಿದೆ. ಆದರೆ ಸರ್ಕಾರ ₹ 150 ಹೆಚ್ಚಿಸಿದೆ. 9.5 ಸಕ್ಕರೆ ಇಳುವರಿ ತರುವ ಪ್ರತಿ ಟನ್ ಕಬ್ಬಿಗೆ ₹ 3,500 ಎಫ್.ಆರ್.ಪಿ. ನಿಗದಿಯಾಗಿದ್ದರೆ ಕಬ್ಬು ಬೆಳೆಗಾರರು ಒಂದಿಷ್ಟು ಲಾಭ ಕಾಣಲು ಸಾಧ್ಯವಾಗುತ್ತಿತ್ತು. ಆದರೆ ಸರ್ಕಾರ10.25 ಸಕ್ಕರೆ ಇಳುವರಿ ಹೊಂದಿರುವ ಪ್ರತಿ ಟನ್ ಕಬ್ಬಿಗೆ ₹ ,3050 ನಿಗದಿ ಮಾಡಿರುವುದರಿಂದ 9.5 ಸಕ್ಕರೆ ಇಳುವರಿಯ ಕಬ್ಬಿಗೆ ₹ 2825 ಸಿಕ್ಕಂತಾಗುತ್ತದೆ. ಇದರಿಂದ ರೈತರು ನಷ್ಟ ಅನುಭವಿಸುವಂತಾಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ದೂರಿದರು.