ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಬೆನ್ನೂರು: ಹಿಂದೂ ಮುಸ್ಲಿಂ ಭಾವೈಕ್ಯ ಮೆರೆದ ಉರುಸ್‌

Last Updated 2 ಮಾರ್ಚ್ 2023, 3:12 IST
ಅಕ್ಷರ ಗಾತ್ರ

ಮಲೇಬೆನ್ನೂರು: ಇಲ್ಲಿನ ಹಜರತ್ ಸೈಯದ್‌ ಹಬೀಬುಲ್ಲಾ ಶಾಹ್‌ ಖಾದ್ರಿ ಉರುಸ್‌ ಪ್ರಯುಕ್ತ ಬುಧವಾರ ಪಟ್ಟಣದಲ್ಲಿ ಗಂಧ (ಸಂಧಲ್‌) ಮೆರವಣಿಗೆ ವೈಭವದಿಂದ ನಡೆಯಿತು.

ಹಿಂದೂಗಳ ಮನೆಯಲ್ಲಿ ಶ್ರೀಗಂಧ ಪೂಜಿಸಿ ಪಡೆದ ಮುಸ್ಲಿಂ ಧರ್ಮಗುರುಗಳು ಸಿಹಿ ವಿತರಿಸಿದರು. ದರ್ಗಾ ಷರೀಫ್‌ನಿಂದ ಆರಂಭವಾದ ಮೆರವಣಿಗೆ ಪಟ್ಟಣದ ರಾಜಬೀದಿಯಲ್ಲಿ ಸಾಗಿ ಬಂದಿತು. ಬ್ಯಾಂಡ್‌ಸೆಟ್‌, ಫಕೀರರ ಮೆರವಣಿಗೆ ಪವಾಡ ಜನಮನ ಸೆಳೆದವು.

ಗಂಧದ ಮೆರವಣಿಗೆ ವೇಳೆ ಹಿಂದೂಗಳು ಸಕ್ಕರೆ ನಿವೇದಿಸಿ ಭಕ್ತಿ ಸಮರ್ಪಿಸಿದರು. ದರ್ಗಾ ಮೈದಾನ ಹಾಗೂ ಮುಖ್ಯಬೀದಿಯನ್ನು ಅಲಂಕರಿಸಲಾಗಿತ್ತು. ವಿವಿಧ ಆಟ, ಜಾತ್ರೆ, ವಸ್ತು ಪ್ರದರ್ಶನವನ್ನು ದರ್ಗಾ ಮೈದಾನದಲ್ಲಿ ಆಯೋಜಿಸಲಾಗಿದೆ. ಪೊಲೀಸರು ಭದ್ರತೆ ಒದಗಿಸಿದ್ದರು.

ಕವ್ವಾಲಿ: ದರ್ಗಾ ಮೈದಾನದಲ್ಲಿ ಮಾರ್ಚ್‌ 2ರಂದು ರಾತ್ರಿ ಕವ್ವಾಲಿ ಗಾಯನ ಕಾರ್ಯಕ್ರಮವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT