<p><strong>ದಾವಣಗೆರೆ</strong>: ‘ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಿಂದ ಉಚ್ಚಾಟಿತರಾಗಿರುವ ವಚನಾನಂದ ಶ್ರೀಗಳು ಮಠದ ವಸತಿ ನಿಲಯದ ವಿದ್ಯಾರ್ಥಿಗಳಿಂದ ಬಲವಂತವಾಗಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು’ ಎಂದು ಗುರುಪೀಠದ ಟ್ರಸ್ಟ್ನ ಸದಸ್ಯ ಚಂದ್ರಶೇಖರ್ ಪೂಜಾರ್ ಆರೋಪ ಮಾಡಿದರು.</p>.<p>ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು, ‘ಸ್ವಾಮೀಜಿ ನಿತ್ಯ ನಾಲ್ಕೈದು ವಿದ್ಯಾರ್ಥಿಗಳಿಂದ ಮಸಾಜ್ ಮಾಡಿಸಿ ಕೊಳ್ಳುತ್ತಿದ್ದರು. ಈ ವಿಕೃತ ಭಾವ ಸಹಿಸಿಕೊಳ್ಳಲಾಗದೇ 60 ವಿದ್ಯಾರ್ಥಿಗಳ ಪೈಕಿ ಅನೇಕ ವಿದ್ಯಾರ್ಥಿಗಳು ವಸತಿ ನಿಲಯ ತೊರೆದಿದ್ದಾರೆ. ಈಗ ಐವರು ಮಾತ್ರ ಇದ್ದಾರೆ’ ಎಂದು ತಿಳಿಸಿದರು.</p>.<p>ವಿದ್ಯಾರ್ಥಿಗಳು, ಅವರ ಪಾಲಕರು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು. ದೂರು ನೀಡಿದ್ದರೆ ಪೋಕ್ಸೊ ಪ್ರಕರಣ ದಾಖಲಾಗಿ ಶ್ರೀಗಳ ಬಂಧನವಾಗುತ್ತಿತ್ತು. ಸಮುದಾಯದ ಹಿತದೃಷ್ಟಿಯಿಂದ ದೂರು ನೀಡದಂತೆ ಟ್ರಸ್ಟ್ನವರೇ ಪಾಲಕರನ್ನು ಸಮಾಧಾನ ಪಡಿಸಿದ್ದೇವೆ’ ಎಂದು ಸ್ಪಷ್ಟಪಡಿಸಿದರು. </p>.<p>‘ಶ್ರೀಗಳು ವಿದ್ಯಾರ್ಥಿಗಳಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದುದು 2 ತಿಂಗಳ ಹಿಂದೆ ಟ್ರಸ್ಟಿಗಳ ಗಮನಕ್ಕೆ ಬಂದಿದೆ. ಈ ಬಗ್ಗೆ ಸ್ವಾಮೀಜಿಗೆ ಬುದ್ಧಿ ಹೇಳಿ ತಿದ್ದಲು ಮುಂದಾದಾಗ, ಅವರು ಟ್ರಸ್ಟ್ ವಿರುದ್ಧವೇ ತಿರುಗಿಬಿದ್ದರು. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ‘ಲೆಕ್ಕ ಕೊಡಿ’ ಹೋರಾಟ ಶುರು ಮಾಡಿಸಿದ್ದಾರೆ’ ಎಂದು ಆರೋಪಿಸಿದರು.</p>.<p>‘ಮಸಾಜ್’ ಸ್ವಾಮೀಜಿಗೆ ನೈತಿಕತೆ ಇದ್ದರೆ ಕೂಡಲೇ ಮಠ ಬಿಟ್ಟು ಹೊರಹೋಗಲಿ. ಹೋಗದಿದ್ದರೆ ಹೇಗೆ ಕಳಿಸಬೇಕು ಎಂಬುದು ಟ್ರಸ್ಟಿಗಳಿಗೆ ಗೊತ್ತಿದೆ’ ಎಂದು ಅವರು ಸವಾಲೆಸೆದರು.</p>.<p><strong>ವಿಡಿಯೊ ಪ್ರದರ್ಶನ: </strong></p>.<p>ವಚನಾನಂದ ಶ್ರೀ ಅವರು ಪೀಠದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎನ್ನಲಾದ ವಿಡಿಯೊವನ್ನು ಚಂದ್ರಶೇಖರ್ ಪೂಜಾರ್ ಪ್ರದರ್ಶಿಸಿದರು.</p>.<p>‘ಮಸಾಜ್ ಮಾಡಿಸಿಕೊಳ್ಳುವುದು, ಬಟ್ಟೆ ತೊಳೆಸಿಕೊಳ್ಳುವುದು ಸೇರಿ ವೈಯಕ್ತಿಕ ಕೆಲಸಗಳಿಗೆ ವಚನಾನಂದ ಶ್ರೀಗಳು ನಮ್ಮನ್ನು ಬಳಸಿಕೊಳ್ಳುತ್ತಿದ್ದರು’ ಎಂದು ವಿದ್ಯಾರ್ಥಿಗಳು ಆರೋಪಿಸಿರುವುದು ವಿಡಿಯೊದಲ್ಲಿದೆ.</p>.<p><strong>‘ಸೂಕ್ತ ಸಮಯದಲ್ಲಿ ಸೂಕ್ತ ಉತ್ತರ’</strong></p><p>‘ಟ್ರಸ್ಟ್ನವರ ಆರೋಪಗಳಿಗೆ ಸೂಕ್ತ ಸಮಯದಲ್ಲಿ ಸೂಕ್ತ ಉತ್ತರ ನೀಡುವೆ’ ಎಂದು ಹರಿಹರದ ಪಂಚಮಸಾಲಿ ಗುರುಪೀಠದಿಂದ ಉಚ್ಚಾಟಿತರಾಗಿರುವ ವಚನಾನಂದ ಸ್ವಾಮೀಜಿ ಸಂಜೆ ಹರಿಹರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. </p><p>‘ಸಮುದಾಯ ಹಾಗೂ ಪೀಠದ ಘನತೆ ಹೆಚ್ಚಿಸುವುದೇ ನಮ್ಮ ಆದ್ಯತೆ. ಭಕ್ತರು ತನು, ಮನ, ಧನದ ಮೂಲಕ ಸೇವೆ ಸಲ್ಲಿಸಿದ್ದರಿಂದ ಪೀಠವು ಇಂದು ಭವ್ಯವಾಗಿ ಕಂಗೊಳಿಸುತ್ತಿದೆ. ನಾನು ಮಠದಲ್ಲಿ ಇದ್ದೇನೆ, ಪೀಠದಲ್ಲೇ ಮುಂದುವರಿಯುವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಭಕ್ತರಿಗಾಗಿಯೇ ತ್ರಿವಿಧ ದಾಸೋಹ ನಡೆಯುತ್ತಿದೆ. ಪಂಚದಾಸೋಹ ಪೀಠ ಆಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ’ ಎಂದರು. </p><p>‘ನಿಂದನೆಗಳಿವೆ. ಮಾಡಬೇಕಾದ ಕೆಲಸ ಸಾಕಷ್ಟಿದೆ. ಅದರಲ್ಲಿ ತೊಡಗಿಸಿಕೊಳ್ಳೋಣ. ಶ್ವಾಸಗುರು ನಾನು ವರ್ತಮಾನದಲ್ಲಿ ಇರಬೇಕು ಎಂಬ ಉದ್ದೇಶವಿದೆ. ಬುದ್ಧ, ಬಸವ ಆಗುವುದು ಸುಲಭವಲ್ಲ. ಸನ್ಯಾಸವು ಬೆಂಕಿ ಬೆಳಕಿನ ದಾರಿಯಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ‘ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಿಂದ ಉಚ್ಚಾಟಿತರಾಗಿರುವ ವಚನಾನಂದ ಶ್ರೀಗಳು ಮಠದ ವಸತಿ ನಿಲಯದ ವಿದ್ಯಾರ್ಥಿಗಳಿಂದ ಬಲವಂತವಾಗಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು’ ಎಂದು ಗುರುಪೀಠದ ಟ್ರಸ್ಟ್ನ ಸದಸ್ಯ ಚಂದ್ರಶೇಖರ್ ಪೂಜಾರ್ ಆರೋಪ ಮಾಡಿದರು.</p>.<p>ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು, ‘ಸ್ವಾಮೀಜಿ ನಿತ್ಯ ನಾಲ್ಕೈದು ವಿದ್ಯಾರ್ಥಿಗಳಿಂದ ಮಸಾಜ್ ಮಾಡಿಸಿ ಕೊಳ್ಳುತ್ತಿದ್ದರು. ಈ ವಿಕೃತ ಭಾವ ಸಹಿಸಿಕೊಳ್ಳಲಾಗದೇ 60 ವಿದ್ಯಾರ್ಥಿಗಳ ಪೈಕಿ ಅನೇಕ ವಿದ್ಯಾರ್ಥಿಗಳು ವಸತಿ ನಿಲಯ ತೊರೆದಿದ್ದಾರೆ. ಈಗ ಐವರು ಮಾತ್ರ ಇದ್ದಾರೆ’ ಎಂದು ತಿಳಿಸಿದರು.</p>.<p>ವಿದ್ಯಾರ್ಥಿಗಳು, ಅವರ ಪಾಲಕರು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು. ದೂರು ನೀಡಿದ್ದರೆ ಪೋಕ್ಸೊ ಪ್ರಕರಣ ದಾಖಲಾಗಿ ಶ್ರೀಗಳ ಬಂಧನವಾಗುತ್ತಿತ್ತು. ಸಮುದಾಯದ ಹಿತದೃಷ್ಟಿಯಿಂದ ದೂರು ನೀಡದಂತೆ ಟ್ರಸ್ಟ್ನವರೇ ಪಾಲಕರನ್ನು ಸಮಾಧಾನ ಪಡಿಸಿದ್ದೇವೆ’ ಎಂದು ಸ್ಪಷ್ಟಪಡಿಸಿದರು. </p>.<p>‘ಶ್ರೀಗಳು ವಿದ್ಯಾರ್ಥಿಗಳಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದುದು 2 ತಿಂಗಳ ಹಿಂದೆ ಟ್ರಸ್ಟಿಗಳ ಗಮನಕ್ಕೆ ಬಂದಿದೆ. ಈ ಬಗ್ಗೆ ಸ್ವಾಮೀಜಿಗೆ ಬುದ್ಧಿ ಹೇಳಿ ತಿದ್ದಲು ಮುಂದಾದಾಗ, ಅವರು ಟ್ರಸ್ಟ್ ವಿರುದ್ಧವೇ ತಿರುಗಿಬಿದ್ದರು. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ‘ಲೆಕ್ಕ ಕೊಡಿ’ ಹೋರಾಟ ಶುರು ಮಾಡಿಸಿದ್ದಾರೆ’ ಎಂದು ಆರೋಪಿಸಿದರು.</p>.<p>‘ಮಸಾಜ್’ ಸ್ವಾಮೀಜಿಗೆ ನೈತಿಕತೆ ಇದ್ದರೆ ಕೂಡಲೇ ಮಠ ಬಿಟ್ಟು ಹೊರಹೋಗಲಿ. ಹೋಗದಿದ್ದರೆ ಹೇಗೆ ಕಳಿಸಬೇಕು ಎಂಬುದು ಟ್ರಸ್ಟಿಗಳಿಗೆ ಗೊತ್ತಿದೆ’ ಎಂದು ಅವರು ಸವಾಲೆಸೆದರು.</p>.<p><strong>ವಿಡಿಯೊ ಪ್ರದರ್ಶನ: </strong></p>.<p>ವಚನಾನಂದ ಶ್ರೀ ಅವರು ಪೀಠದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎನ್ನಲಾದ ವಿಡಿಯೊವನ್ನು ಚಂದ್ರಶೇಖರ್ ಪೂಜಾರ್ ಪ್ರದರ್ಶಿಸಿದರು.</p>.<p>‘ಮಸಾಜ್ ಮಾಡಿಸಿಕೊಳ್ಳುವುದು, ಬಟ್ಟೆ ತೊಳೆಸಿಕೊಳ್ಳುವುದು ಸೇರಿ ವೈಯಕ್ತಿಕ ಕೆಲಸಗಳಿಗೆ ವಚನಾನಂದ ಶ್ರೀಗಳು ನಮ್ಮನ್ನು ಬಳಸಿಕೊಳ್ಳುತ್ತಿದ್ದರು’ ಎಂದು ವಿದ್ಯಾರ್ಥಿಗಳು ಆರೋಪಿಸಿರುವುದು ವಿಡಿಯೊದಲ್ಲಿದೆ.</p>.<p><strong>‘ಸೂಕ್ತ ಸಮಯದಲ್ಲಿ ಸೂಕ್ತ ಉತ್ತರ’</strong></p><p>‘ಟ್ರಸ್ಟ್ನವರ ಆರೋಪಗಳಿಗೆ ಸೂಕ್ತ ಸಮಯದಲ್ಲಿ ಸೂಕ್ತ ಉತ್ತರ ನೀಡುವೆ’ ಎಂದು ಹರಿಹರದ ಪಂಚಮಸಾಲಿ ಗುರುಪೀಠದಿಂದ ಉಚ್ಚಾಟಿತರಾಗಿರುವ ವಚನಾನಂದ ಸ್ವಾಮೀಜಿ ಸಂಜೆ ಹರಿಹರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. </p><p>‘ಸಮುದಾಯ ಹಾಗೂ ಪೀಠದ ಘನತೆ ಹೆಚ್ಚಿಸುವುದೇ ನಮ್ಮ ಆದ್ಯತೆ. ಭಕ್ತರು ತನು, ಮನ, ಧನದ ಮೂಲಕ ಸೇವೆ ಸಲ್ಲಿಸಿದ್ದರಿಂದ ಪೀಠವು ಇಂದು ಭವ್ಯವಾಗಿ ಕಂಗೊಳಿಸುತ್ತಿದೆ. ನಾನು ಮಠದಲ್ಲಿ ಇದ್ದೇನೆ, ಪೀಠದಲ್ಲೇ ಮುಂದುವರಿಯುವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಭಕ್ತರಿಗಾಗಿಯೇ ತ್ರಿವಿಧ ದಾಸೋಹ ನಡೆಯುತ್ತಿದೆ. ಪಂಚದಾಸೋಹ ಪೀಠ ಆಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ’ ಎಂದರು. </p><p>‘ನಿಂದನೆಗಳಿವೆ. ಮಾಡಬೇಕಾದ ಕೆಲಸ ಸಾಕಷ್ಟಿದೆ. ಅದರಲ್ಲಿ ತೊಡಗಿಸಿಕೊಳ್ಳೋಣ. ಶ್ವಾಸಗುರು ನಾನು ವರ್ತಮಾನದಲ್ಲಿ ಇರಬೇಕು ಎಂಬ ಉದ್ದೇಶವಿದೆ. ಬುದ್ಧ, ಬಸವ ಆಗುವುದು ಸುಲಭವಲ್ಲ. ಸನ್ಯಾಸವು ಬೆಂಕಿ ಬೆಳಕಿನ ದಾರಿಯಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>