<p><strong>ಹರಿಹರ (ದಾವಣಗೆರೆ):</strong> ‘ನನ್ನ ಪರವಾಗಿ ಅಪಾರ ಭಕ್ತ ಸಮೂಹವಿದೆ. ಎಂಟು ವರ್ಷಗಳಿಂದ ಮಠವನ್ನು ಅತ್ಯುತ್ತಮವಾಗಿ ಕಟ್ಟಿದ್ದೇನೆ. ನಾನಲ್ಲ, ಟ್ರಸ್ಟಿಗಳು ಮೊದಲು ಮಠ ತೊರೆಯಲಿ’ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ತಿಳಿಸಿದರು.</p><p>ಹರಿಹರ ಸಮೀಪದ ಮಠದ ಆವರಣದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠ ಟ್ರಸ್ಟ್ ಸೋಮವಾರ ಹಮ್ಮಿಕೊಂಡಿರುವ ಲೆಕ್ಕಪತ್ರ ಮಂಡನೆ ಸಭೆಗೂ ಮುನ್ನ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.</p><p>‘ಟ್ರಸ್ಟಿಗಳು ಒತ್ತಾಯ ಮಾಡಿ ಮಠಕ್ಕೆ ಕರೆತಂದು ಪೀಠಕ್ಕೆ ಕೂರಿಸಿದ್ದಾರೆ. ಎಂಟು ವರ್ಷಗಳ ಹಿಂದೆ ನಾವು ಪಟ್ಟಾಧಿಕಾರ ತೆಗೆದುಕೊಂಡಾಗ ಮಠದಲ್ಲಿ ಏನೂ ಇರಲಿಲ್ಲ. ಮಠಕ್ಕೆ ರೂಪವೊಂದನ್ನು ನೀಡಿ, ಸಾವಿರಾರು ಭಕ್ತರು ಮಠಕ್ಕೆ ಬರುವಂತೆ ಮಾಡಿದ್ದೇವೆ. ಈಗ ಮಠದಿಂದ ಹೊರ ಹಾಕಿದರೆ ಹೇಗೆ? ಯಾವುದೇ ಕಾರಣಕ್ಕೂ ಮಠದಿಂದ ಹೊರ ನಡೆಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. </p><p>‘ನಾನು ಬಡ ಪಂಚಮಸಾಲಿ ರೈತ ಕುಟುಂಬದಿಂದ ಬೆಳೆದು ಬಂದಿದ್ದೇನೆ. ಮಠದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದೇನೆ ಎಂಬ ಆರೋಪದಲ್ಲಿ ಹುರುಳಿಲ್ಲ. ನಾನು ವಿಐಪಿ ಸಂಸ್ಕೃತಿ ಪಾಲನೆ ಮಾಡಿದ್ದರೆ ಸಾಮಾನ್ಯ ಭಕ್ತರು ನನ್ನ ಪರವಾಗಿ ಮಠಕ್ಕೆ ಬರುತ್ತಿದ್ದರೇ’ ಎಂದು ಪ್ರಶ್ನಿಸಿದರು.</p><p>‘ಗುರುಪೀಠದ ಟ್ರಸ್ಟ್ನಲ್ಲಿ ಭಾರಿ ಅವ್ಯಹಾರ ನಡೆದಿದೆ. ಪೀಠದ ಮೊದಲ ಗುರುಗಳಾದ ಮಹಂತ ಶಿವಾಚಾರ್ಯ ಸ್ವಾಮೀಜಿ ಕೂಡ ಲೆಕ್ಕಪತ್ರ ಕೇಳಿದ್ದರು. ಇದೇ ಕಾರಣಕ್ಕೆ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರನ್ನು ಮಠದಿಂದ ಹೊರಹಾಕಲಾಯಿತು. ಈಗ ಲೆಕ್ಕ ಪತ್ರವನ್ನು ಭಕ್ತರು ಕೇಳಿದ ಕಾರಣಕ್ಕೆ ನನ್ನನ್ನು ಮಠದಿಂದ ಹೊರಹಾಕುವ ಪ್ರಯತ್ನ ನಡೆಯುತ್ತಿದೆ. ಇದು ಸಫಲವಾಗುವುದಿಲ್ಲ’ ಎಂದರು.</p><p>‘ಹೊನ್ನಳಿಯ ರಾಜಕುಮಾರ್ ಅವರು ಮಠದ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಬಳಿಕ ಆಡಳಿತ ಚೆನ್ನಾಗಿ ನಡೆಯುತ್ತಿದೆ. ಆಡಳಿತಾಧಿಕಾರಿ ಮಠವನ್ನು ಚೆನ್ನಾಗಿ ಬೆಳಸುತ್ತಿದ್ದಾರೆ. ಅಧ್ಯಾತ್ಮ, ಅಕ್ಷರ ಹಾಗೂ ಅನ್ನ ದಾಸೋಹ ಮಠದಲ್ಲಿ ನಡೆಯಬೇಕು. ಪೀಠಕ್ಕೆ ಬಂದ ಬಳಿಕ ಒಮ್ಮೆಯೂ ಮನೆಗೆ ಆಹ್ವಾನಿಸಿ ಪಾದಪೂಜೆ ಮಾಡದ ಟ್ರಸ್ಟ್ ಸದಸ್ಯರಲ್ಲಿ ಅಹಂಕಾರ ಭಾವ ಹೆಚ್ಚಾಗಿದೆ’ ಎಂದು ಕಿಡಿಕಾರಿದರು.</p><p>‘ಮಠದಲ್ಲಿ ವಸತಿ ನಿಲಯ ನಿರ್ಮಾಣಕ್ಕೆ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಇಲಾಖೆ 2021 ಜ.18ರಂದು ₹ 10 ಕೋಟಿ ಅನುದಾನ ಬಿಡುಗಡೆ ಆಗಿದೆ. ಟ್ರಸ್ಟ್ ಸದಸ್ಯರು ನಕಲಿ ಸಹಿ ಹಾಕಿ ಹಣ ಪಡೆದು ದುರ್ಬಳಕೆ ಮಾಡಿಕೊಂಡಿದ್ದಾರೆ. ವಸತಿ ನಿಲಯದ ಕಟ್ಟಡ ಕೂಡ ಪೂರ್ಣಗೊಳಿಸಿಲ್ಲ’ ಎಂದು ದೂರಿದರು. </p>.<p><strong>ಮಠದಲ್ಲಿ ಬಿಗುವಿನ ವಾತಾವರಣ</strong></p><p>ಲೆಕ್ಕಪತ್ರ ಮಂಡನೆ ಸಭೆಯನ್ನು ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಟ್ರಸ್ಟ್ ಸೋಮವಾರ ಆಯೋಜಿಸಿದ್ದರಿಂದ ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮಠದಲ್ಲಿ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ.</p><p>ಮಠದಲ್ಲಿ ಸ್ವಾಮೀಜಿ ಪರ ಭಕ್ತರು ಹಾಗೂ ಟ್ರಸ್ಟ್ ಪರವಾಗಿ ಇರುವ ಸಮುದಾಯದ ಜನರು ಸೇರಿದ್ದಾರೆ. ಸ್ವಾಮೀಜಿ ಪರವಾಗಿ ಭಕ್ತರು ಹಾಗೂ ಟ್ರಸ್ಟ್ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಪರ ಜನರು ಪರಸ್ಪರ ಘೋಷಣೆ ಕೂಗುತ್ತಿದ್ದಾರೆ.</p><p>ಮಠದ ಪೀಠದ ಸಭಾಂಗಣದಲ್ಲಿ ಸ್ವಾಮೀಜಿ ಕುಳಿತಿದ್ದು, ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ.</p>.<div><blockquote>ಲೆಕ್ಕಪತ್ರ ಮಂಡನೆ ಸಭೆಗೆ ಹಾಜರಾಗುವುದಿಲ್ಲ. ಟ್ರಸ್ಟ್ ನೀಡುವ ಕೃಷ್ಣನ ಲೆಕ್ಕವನ್ನು ನಾವು ಒಪ್ಪುವುದಿಲ್ಲ. ಶ್ರೀರಾಮನ ಲೆಕ್ಕ ಕೊಡಲಿ. </blockquote><span class="attribution">- ವಚನಾನಂದ ಸ್ವಾಮೀಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ (ದಾವಣಗೆರೆ):</strong> ‘ನನ್ನ ಪರವಾಗಿ ಅಪಾರ ಭಕ್ತ ಸಮೂಹವಿದೆ. ಎಂಟು ವರ್ಷಗಳಿಂದ ಮಠವನ್ನು ಅತ್ಯುತ್ತಮವಾಗಿ ಕಟ್ಟಿದ್ದೇನೆ. ನಾನಲ್ಲ, ಟ್ರಸ್ಟಿಗಳು ಮೊದಲು ಮಠ ತೊರೆಯಲಿ’ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ತಿಳಿಸಿದರು.</p><p>ಹರಿಹರ ಸಮೀಪದ ಮಠದ ಆವರಣದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠ ಟ್ರಸ್ಟ್ ಸೋಮವಾರ ಹಮ್ಮಿಕೊಂಡಿರುವ ಲೆಕ್ಕಪತ್ರ ಮಂಡನೆ ಸಭೆಗೂ ಮುನ್ನ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.</p><p>‘ಟ್ರಸ್ಟಿಗಳು ಒತ್ತಾಯ ಮಾಡಿ ಮಠಕ್ಕೆ ಕರೆತಂದು ಪೀಠಕ್ಕೆ ಕೂರಿಸಿದ್ದಾರೆ. ಎಂಟು ವರ್ಷಗಳ ಹಿಂದೆ ನಾವು ಪಟ್ಟಾಧಿಕಾರ ತೆಗೆದುಕೊಂಡಾಗ ಮಠದಲ್ಲಿ ಏನೂ ಇರಲಿಲ್ಲ. ಮಠಕ್ಕೆ ರೂಪವೊಂದನ್ನು ನೀಡಿ, ಸಾವಿರಾರು ಭಕ್ತರು ಮಠಕ್ಕೆ ಬರುವಂತೆ ಮಾಡಿದ್ದೇವೆ. ಈಗ ಮಠದಿಂದ ಹೊರ ಹಾಕಿದರೆ ಹೇಗೆ? ಯಾವುದೇ ಕಾರಣಕ್ಕೂ ಮಠದಿಂದ ಹೊರ ನಡೆಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. </p><p>‘ನಾನು ಬಡ ಪಂಚಮಸಾಲಿ ರೈತ ಕುಟುಂಬದಿಂದ ಬೆಳೆದು ಬಂದಿದ್ದೇನೆ. ಮಠದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದೇನೆ ಎಂಬ ಆರೋಪದಲ್ಲಿ ಹುರುಳಿಲ್ಲ. ನಾನು ವಿಐಪಿ ಸಂಸ್ಕೃತಿ ಪಾಲನೆ ಮಾಡಿದ್ದರೆ ಸಾಮಾನ್ಯ ಭಕ್ತರು ನನ್ನ ಪರವಾಗಿ ಮಠಕ್ಕೆ ಬರುತ್ತಿದ್ದರೇ’ ಎಂದು ಪ್ರಶ್ನಿಸಿದರು.</p><p>‘ಗುರುಪೀಠದ ಟ್ರಸ್ಟ್ನಲ್ಲಿ ಭಾರಿ ಅವ್ಯಹಾರ ನಡೆದಿದೆ. ಪೀಠದ ಮೊದಲ ಗುರುಗಳಾದ ಮಹಂತ ಶಿವಾಚಾರ್ಯ ಸ್ವಾಮೀಜಿ ಕೂಡ ಲೆಕ್ಕಪತ್ರ ಕೇಳಿದ್ದರು. ಇದೇ ಕಾರಣಕ್ಕೆ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರನ್ನು ಮಠದಿಂದ ಹೊರಹಾಕಲಾಯಿತು. ಈಗ ಲೆಕ್ಕ ಪತ್ರವನ್ನು ಭಕ್ತರು ಕೇಳಿದ ಕಾರಣಕ್ಕೆ ನನ್ನನ್ನು ಮಠದಿಂದ ಹೊರಹಾಕುವ ಪ್ರಯತ್ನ ನಡೆಯುತ್ತಿದೆ. ಇದು ಸಫಲವಾಗುವುದಿಲ್ಲ’ ಎಂದರು.</p><p>‘ಹೊನ್ನಳಿಯ ರಾಜಕುಮಾರ್ ಅವರು ಮಠದ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಬಳಿಕ ಆಡಳಿತ ಚೆನ್ನಾಗಿ ನಡೆಯುತ್ತಿದೆ. ಆಡಳಿತಾಧಿಕಾರಿ ಮಠವನ್ನು ಚೆನ್ನಾಗಿ ಬೆಳಸುತ್ತಿದ್ದಾರೆ. ಅಧ್ಯಾತ್ಮ, ಅಕ್ಷರ ಹಾಗೂ ಅನ್ನ ದಾಸೋಹ ಮಠದಲ್ಲಿ ನಡೆಯಬೇಕು. ಪೀಠಕ್ಕೆ ಬಂದ ಬಳಿಕ ಒಮ್ಮೆಯೂ ಮನೆಗೆ ಆಹ್ವಾನಿಸಿ ಪಾದಪೂಜೆ ಮಾಡದ ಟ್ರಸ್ಟ್ ಸದಸ್ಯರಲ್ಲಿ ಅಹಂಕಾರ ಭಾವ ಹೆಚ್ಚಾಗಿದೆ’ ಎಂದು ಕಿಡಿಕಾರಿದರು.</p><p>‘ಮಠದಲ್ಲಿ ವಸತಿ ನಿಲಯ ನಿರ್ಮಾಣಕ್ಕೆ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಇಲಾಖೆ 2021 ಜ.18ರಂದು ₹ 10 ಕೋಟಿ ಅನುದಾನ ಬಿಡುಗಡೆ ಆಗಿದೆ. ಟ್ರಸ್ಟ್ ಸದಸ್ಯರು ನಕಲಿ ಸಹಿ ಹಾಕಿ ಹಣ ಪಡೆದು ದುರ್ಬಳಕೆ ಮಾಡಿಕೊಂಡಿದ್ದಾರೆ. ವಸತಿ ನಿಲಯದ ಕಟ್ಟಡ ಕೂಡ ಪೂರ್ಣಗೊಳಿಸಿಲ್ಲ’ ಎಂದು ದೂರಿದರು. </p>.<p><strong>ಮಠದಲ್ಲಿ ಬಿಗುವಿನ ವಾತಾವರಣ</strong></p><p>ಲೆಕ್ಕಪತ್ರ ಮಂಡನೆ ಸಭೆಯನ್ನು ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಟ್ರಸ್ಟ್ ಸೋಮವಾರ ಆಯೋಜಿಸಿದ್ದರಿಂದ ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮಠದಲ್ಲಿ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ.</p><p>ಮಠದಲ್ಲಿ ಸ್ವಾಮೀಜಿ ಪರ ಭಕ್ತರು ಹಾಗೂ ಟ್ರಸ್ಟ್ ಪರವಾಗಿ ಇರುವ ಸಮುದಾಯದ ಜನರು ಸೇರಿದ್ದಾರೆ. ಸ್ವಾಮೀಜಿ ಪರವಾಗಿ ಭಕ್ತರು ಹಾಗೂ ಟ್ರಸ್ಟ್ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಪರ ಜನರು ಪರಸ್ಪರ ಘೋಷಣೆ ಕೂಗುತ್ತಿದ್ದಾರೆ.</p><p>ಮಠದ ಪೀಠದ ಸಭಾಂಗಣದಲ್ಲಿ ಸ್ವಾಮೀಜಿ ಕುಳಿತಿದ್ದು, ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ.</p>.<div><blockquote>ಲೆಕ್ಕಪತ್ರ ಮಂಡನೆ ಸಭೆಗೆ ಹಾಜರಾಗುವುದಿಲ್ಲ. ಟ್ರಸ್ಟ್ ನೀಡುವ ಕೃಷ್ಣನ ಲೆಕ್ಕವನ್ನು ನಾವು ಒಪ್ಪುವುದಿಲ್ಲ. ಶ್ರೀರಾಮನ ಲೆಕ್ಕ ಕೊಡಲಿ. </blockquote><span class="attribution">- ವಚನಾನಂದ ಸ್ವಾಮೀಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>