ಹರಿಹರ: ಮಠ ಹಾಗೂ ಗುರುಪೀಠಗಳ ಸ್ವಾಮೀಜಿಗಳು ಕೇವಲ ಧಾರ್ಮಿಕ ಕಾರ್ಯಗಳಿಗೆ, ಭಕ್ತರ ಮಾರ್ಗದರ್ಶನ ಹಾಗೂ ಆಶೀರ್ವಾದ ಮಾಡಲು ಮಾತ್ರ ಸೀಮಿತ ಎಂಬ ಭಾವನೆ ಸಹಜ. ಆದರೆ, ತಾಲ್ಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಬರಿಗೈಲಿ ನಾಗರಹಾವನ್ನು ಹಿಡಿದು ರಕ್ಷಿಸುವ ಮೂಲಕ ಜೀವ ಮೌಲ್ಯವನ್ನು ಸಾರಿದ್ದಾರೆ.