ಆ ಕಳಸಕ್ಕೆ ಸೀರೆ, ಕುಪ್ಪಸ ತೊಡಿಸಿ ಲಕ್ಷ್ಮಿಯ ಮುಖವಾಡ ಹಾಕಿ ಕುಂಕುಮ ಇಟ್ಟು, ಮೂಗುತಿ, ಆಭರಣ ಹಾಗೂ ಬಳೆಯನ್ನು ಧರಿಸಿ ಶೃಂಗರಿಸಲಾಗಿತ್ತು. ಸಾಂಕೇತಿಕವಾಗಿ ಐದು ಮುತ್ತೈದೆಯರಿಗೆ ಬಾಗಿನ ನೀಡಿ ಉಡಿ ತುಂಬಿಸಲಾಯಿತು. ಕುಂಕುಮ, ಹೂವು, ಧಾನ್ಯ ಹಣ್ಣು, ಬಾದಾಮಿ, ದ್ರಾಕ್ಷಿ, ಖರ್ಜೂರಗಳನ್ನು ಇಟ್ಟು ಆರೋಗ್ಯ, ಸಂಪತ್ತು, ವೃದ್ಧಿಗಾಗಿ ಪ್ರಾರ್ಥಿಸಲಾಯಿತು.