ದಾವಣಗೆರೆ: ‘ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕನ್ನಡ ತಾಯಿ ಭುವನೇಶ್ವರಿ ಹೆಸರಿನಲ್ಲಿ ತಮ್ಮ ಸ್ವಾರ್ಥಕ್ಕಾಗಿಬ್ಲಾಕ್ಮೇಲ್ ಮಾಡುತ್ತಿದ್ದಾರೆ’ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು.
ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ‘ವಾಟಾಳ್ ನಾಗರಾಜ್ ಶಾಸಕರಾಗಿದ್ದಾಗ ಚಿಕ್ಕಪೇಟೆ ವರ್ತಕರಿಗೆ ಕಣ್ಣೀರು ಹಾಕಿಸಿದ್ದಾರೆ.ಇದನ್ನು ಮಾಡುವ ಬದಲು ನಿಮ್ಮ ಸ್ವಂತ ಸಂಪಾದನೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿ ತೋರಿಸಿ’ ಎಂದು ಸವಾಲು ಹಾಕಿದರು.
ನಾನು ನಿಯತ್ತಿನ ನಾಯಿ: ‘ದೇಶ, ರಾಜ್ಯಕ್ಕಾಗಿ, ಮತಕ್ಷೇತ್ರಕ್ಕಾಗಿ ನಾನು ನಿಯತ್ತಿನ ನಾಯಿ ಆಗುತ್ತೇನೆ. ನಾಯಿಗೆ ಇರುವ ನಿಯತ್ತು ಮನುಷ್ಯರಿಗೆ ಇಲ್ಲ’ ಎಂದು ವಾಟಾಳ್ ನಾಗರಾಜ್ ಹೇಳಿಕೆಗೆ ಪ್ರತಿಕ್ರಿಯಿಸಿದರು.