ರಾಜ್ಯದ 18 ಜಿಲ್ಲೆಗಳ ಅಧ್ಯಕ್ಷರ ಘೋಷಣೆ ತಿಂಗಳ ಹಿಂದೆಯೇ ನಡೆದಿತ್ತು. ಉಳಿದ 12 ಜಿಲ್ಲೆಗಳಲ್ಲಿ ಪ್ರಬಲ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದರಿಂದ ಆಯ್ಕೆ ನಡೆದಿರಲಿಲ್ಲ. ಮಂಗಳವಾರ ಎಲ್ಲ 12 ಜಿಲ್ಲೆಗಳ ಅಧ್ಯಕ್ಷರ ಹೆಸರು ಅಂತಿಮಗೊಳಿಸಲಾಗಿದೆ. ದಾವಣಗೆರೆಯಲ್ಲಿ ಕೆ.ಎಂ. ಸುರೇಶ್, ಧನಂಜಯ ಕಡ್ಲೇಬಾಳ್ ಮತ್ತು ವೀರೇಶ್ ಪ್ರಬಲ ಆಕಾಂಕ್ಷಿಗಳಾಗಿದ್ದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವೀರೇಶ್ ಹನಗವಾಡಿ ಹೆಸರನ್ನು ಘೊಷಣೆ ಮಾಡಿದ್ದಾರೆ.