‘ಕೋವಿಡ್ ಕಾರಣ ಗ್ರಾಮದಲ್ಲಿನ ನೀರಿನ ಬವಣೆಯ ಕೇಳುವವರೇ ಇಲ್ಲದಂತಾಗಿದೆ. ಲಾಕ್ಡೌನ್ ಮಾಡಿದ್ದರಿಂದ ಗುಳೆ ಹೋದವರೆಲ್ಲ ಹಳ್ಳಿಗೆ ಮರಳಿ ಬಂದಿದ್ದು, ಎಲ್ಲರೂ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಮನೆಯಲ್ಲಿ ನೀರಿನ ಬಳಕೆ ಹೆಚ್ಚಾಗಿದೆ. ನೀರಿಗಾಗಿ ಕೊಳವೆಬಾವಿ ಎದುರು ಕಾಯುವುದು ತಪ್ಪಿಲ್ಲ’ ಎನ್ನುತ್ತಾರೆ ಗ್ರಾಮದ ಯುವಕ ರಮೇಶ್.