‘ಮುಖ್ಯಮಂತ್ರಿಗಳನ್ನು ಆಹ್ವಾನಿಸುವುದು, ಸಭೆ ನಡೆಸುವುದು, ಸನ್ಮಾನ ಮಾಡುವುದು, ಮನವಿ ಅರ್ಪಿಸುವುದು, ಉಪ್ಪಿಟ್ಟು ತಿನ್ನುವುದು, ಅವರು ಆಶ್ವಾಸನೆ ನೀಡಿ ತೆರಳುವುದು ಇದನ್ನೇ 25 ವರ್ಷಗಳ ಕಾಲ ಮಾಡಿದೆವು. ಯಾವುದೇ ಪ್ರಯೋಜನವಾಗಲಿಲ್ಲ. ನಮ್ಮ ಹಕ್ಕುಗಳಿಗಾಗಿ ಬೀದಿಗಿಳಿಯುವುದು ಅನಿವಾರ್ಯವಾಯಿತು. ಅದರಂತೆ ಈಗ ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ. ಶೇ 98ರಷ್ಟು ಹತ್ತಿರ ಬಂದಿದ್ದೇವೆ. ಇನ್ನು ಶೇ 2 ಕೆಲಸ ಬಾಕಿ ಇದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.