ಈಶ್ವರಿ ಅವರ ಪ್ರತಿಭೆಯನ್ನು ಗುರುತಿಸಿ ಅನೇಕ ಸಂಘ–ಸಂಸ್ಥೆಗಳು ಭಾಲ್ಕಿ, ಔರಾದ್, ಬಸವಕಲ್ಯಾಣ, ಮನ್ನಾಎಖೇಳ್ಳಿ, ಬೀದರ್, ಖಟಕ ಚಿಂಚೋಳಿ, ಬಗದಲ್ ಸೇರಿ ಇತರೆಡೆ ಅವರನ್ನು ಆಹ್ವಾನಿಸಿ ಸಂಗೀತ ಕಾರ್ಯಕ್ರಮ ಆಯೋಜಿಸಿವೆ. ಬಸವಕಲ್ಯಾಣದ ಬಸವ ಉತ್ಸವ, ಬೀದರ್ ಉತ್ಸವ ಕಾರ್ಯಕ್ರಮಗಳಲ್ಲೂ ಗಾಯನ ಮಾಡಿ, ಸಭಿಕರ ಚಪ್ಪಾಳೆ ಗಿಟ್ಟಿಸಿದ್ದಾರೆ.