ವರಿಷ್ಠರು ಆಕ್ಷೇಪಿಸಿಲ್ಲ:‘ಎಸಿಬಿಗೆ ದೂರು ನೀಡಿದ ವಿಚಾರದಲ್ಲಿ ಪಕ್ಷ ನಿಮ್ಮನ್ನು ಬೆಂಬಲಿಸಲಿಲ್ಲವೇ’ ಎಂಬ ಪ್ರಶ್ನೆಗೆ, ‘ಆ ರೀತಿ ಏನೂ ಇಲ್ಲ. ಎಲ್ಲ ಸದಸ್ಯರಿಗೂ ತನಿಖೆ ನಡೆಯಲಿ ಎಂದೇ ಇದೆ. ನನಗೆ ಬೆಂಬಲ ಸಿಕ್ಕಿಲ್ಲ ಎಂದೇನೂ ಇಲ್ಲ. ರೈತ ಸಂಘದವರು, ತಾಲ್ಲೂಕು ಪಂಚಾಯಿತಿಗಳಲ್ಲೂ ಅವ್ಯವಹಾರಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ನನ್ನ ನಿಲುವಿಗೆ ಬದ್ಧನಾಗಿದ್ದೇನೆ. ಪಕ್ಷದ ವರಿಷ್ಠರು ಆಕ್ಷೇಪ ವ್ಯಕ್ತಪಡಿಸಿಲ್ಲ’ ಎಂದು ಪ್ರತಿಕ್ರಿಯಿಸಿದರು.