ಗಣೇಶ ಬಡಾವಣೆಯ ಇಮ್ತಿಯಾಜ್ ಅಬ್ದುಲ್ ಘನಿ ಹಣ ಕಳೆದುಕೊಂಡವರು. ಹರಿಹರದ ಡಿಆರ್ಎಂ ಶಾಲೆಯ ಸಹಶಿಕ್ಷಕರಾಗಿದ್ದ ಇಮ್ತಿಯಾಜ್ ಅವರು, ಹೊನ್ನಾಳಿಯ ಎಸ್ಬಿಐನಿಂದ ₹ 2.40 ಲಕ್ಷವನ್ನು ನಗದೀಕರಿಸಿಕೊಂಡಿದ್ದರು. ನಿವೇಶನ ಮಾರಾಟ ಮಾಡುವ ಸಂಬಂಧ ವ್ಯಕ್ತಿಯೊಬ್ಬರಿಂದ ₹ 2 ಲಕ್ಷ ಪಡೆದು ಬಸ್ನಲ್ಲಿ ದಾವಣಗೆರೆ ಕೆ.ಎಸ್.ಆರ್.ಟಿ.ಸಿ ಬಸ್ನಿಲ್ದಾಣಕ್ಕೆ ಬಂದು ಇಳಿದಿದ್ದರು. ಗಣೇಶ ಬಡಾವಣೆಗೆ ಹೋಗಲು ನಿಲ್ದಾಣದ ಹಿಂಭಾಗದಲ್ಲಿರುವ ಗೇಟ್ನತ್ತ ಹೋಗುತ್ತಿದ್ದರು. ಆಗ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಇಮ್ತಿಯಾಜ್ ಬಳಿ ಇದ್ದ ಕ್ಯಾಶ್ಬ್ಯಾಗ್ ಕಿತ್ತುಕೊಂಡು ಹೋಗಿದ್ದಾರೆ.