2018-19ನೇ ಸಾಲಿನಲ್ಲಿ ಜಿಲ್ಲೆಯ 10,171 ರೈತರಿಗೆ ₹ 20 ಕೋಟಿ ಬೆಳೆ ವಿಮೆ ಮೊತ್ತಪಾವತಿಸಲಾಗಿದೆ. 3,386 ಪ್ರಕರಣಗಳು ಬಾಕಿ ಇವೆ. ₹ 6.44 ಕೋಟಿ ವಿಮಾ ಕಂಪೆನಿಗಳು ಪಾವತಿಸಬೇಕಿದೆ. ಅಡಿಕೆ, ಶುಂಠಿ ಮತ್ತು ಕಾಳು ಮೆಣಸು ತೋಟಗಾರಿಕಾ ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆವಿಮೆ ಸೌಲಭ್ಯವಿದೆ.2018-19ನೇ ಸಾಲಿನಲ್ಲಿ 8,889 ರೈತರು ಬೆಳೆವಿಮೆ ಪಾಲಿಸಿ ಪಡೆದಿದ್ದಾರೆ. ₹ 24.99 ಕೋಟಿ ಬೆಳೆ ವಿಮೆ ನೀಡಬೇಕಿದೆ. ಇದುವರೆಗೆ ₹ 9.63 ಕೋಟಿ ಪಾವತಿಸಲಾಗಿದೆ. 2017-18ನೇ ಸಾಲಿನಲ್ಲಿ 450 ಪ್ರಕರಣಗಳಲ್ಲಿ ₹ 1.33 ಕೋಟಿ ಪಾವತಿಸಬೇಕಿದೆ. ಈ ಕುರಿತು ವಿಮಾ ಕಂಪನಿಗಳಿಗೆ ಸೂಚನಾ ಪತ್ರ ಬರೆಯಬೇಕು ಎಂದುತಾಕೀತು ಮಾಡಿದರು.