ಚಡಚಣ ತಾಲ್ಲೂಕಿನ ಕೆರೂರು ಬಳಿ ನದಿ ತೀರ ಹಾಗೂ ಉಮರಜ ಬಳಿ ತಲಾ 100 ಲಾರಿ ಲೋಡ್ ಮರಳನ್ನು ಸಂಗ್ರಹಿಸಲಾಗಿತ್ತು. ಮರಳು ಸಂಗ್ರಹಕ್ಕಾಗಿ ಬಳಸುತ್ತಿದ್ದ ನಾಲ್ಕು ಲಾರಿ, ಒಂದು ಟಿಪ್ಪರ್ ಹಾಗೂ ಐದು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ್ ಅಮೃತ್ ‘ಪ್ರಜಾವಾಣಿ’ಗೆ ತಿಳಿಸಿದರು.