ವಿದ್ಯಾನಗರ ಪೊಲೀಸ್ ಠಾಣೆ, ಲೋಕಪ್ಪನ ಹಕ್ಕಲ, ರಾಜನಗರ, ವಿಶ್ವೇಶ್ವರನಗರ ಮತ್ತು ಕೆಎಸ್ಸಿಎ ಕ್ರಿಕೆಟ್ ಕ್ರೀಡಾಂಗಣಕ್ಕೆ ಹೋಗಲು ವಿದ್ಯಾನಗರದ ಭಾಗದ ಜನರಿಗೆ ಸುಲಭವಾದ ದಾರಿ ಇದಾಗಿದೆ. ಪದೇ ಪದೇ ಒಂದಿಲ್ಲೊಂದು ಕಾಮಗಾರಿ ನಡೆಯುತ್ತಲೇ ಇರುವುದರಿಂದ ರಸ್ತೆಗಿಂತ ಅಲ್ಲಿ ಮಣ್ಣು ಮತ್ತು ಗುಂಡಿಗಳೇ ಹೆಚ್ಚು ರಾರಾಜಿಸುತ್ತವೆ.