ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆ. 15ರೊಳಗೆ ಬಾಕಿ ವೇತನ ಪಾವತಿಗೆ ಒಪ್ಪಿಗೆ’

ಬೇಡಿಕೆ ಈಡೇರಿಕೆ ಆಗ್ರಹಿಸಿ ಪ್ರತಿಭಟನೆ: ಸಾರಿಗೆ ಸಂಸ್ಥೆ ಭರವಸೆ
Last Updated 24 ಮೇ 2014, 6:26 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕಾರ್ಮಿಕರಿಗೆ ಸಲ್ಲಬೇಕಾಗಿ­ರುವ ಬಾಕಿ ವೇತನವನ್ನು ಆಗಸ್ಟ್‌ 15­ರೊಳಗೆ ಪಾವತಿಸುವುದಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಉಮೇಶ ಕುಸುಗಲ್‌ ಭರವಸೆ ನೀಡಿದ್ದಾರೆ’ ಎಂದು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಲದ ಮುಖ್ಯ ಉಪಾಧ್ಯಕ್ಷ ಎನ್‌.ಆರ್‌. ಕಾನಗೋ ತಿಳಿಸಿದ್ದಾರೆ.

ಕಾರ್ಮಿಕರಿಗೆ ಸಲ್ಲಬೇಕಾಗಿರುವ ಬಾಕಿ ವೇತನ ತಕ್ಷಣ ಬಟವಡೆ ಮಾಡಬೇಕು ಸಹಿತ ವಿವಿಧ ಬೇಡಿಕೆ ಮುಂದಿಟ್ಟು ಹಿರಿಯ ಕಾರ್ಮಿಕ ಮುಖಂಡ ಡಾ.ಕೆ.­ಎಸ್‌. ಶರ್ಮಾ ಸಾರಥ್ಯದಲ್ಲಿ ಸಂಸ್ಥೆಯ ಕೇಂದ್ರ ಕಚೇ­ರಿಯ ಮುಂಭಾಗದಲ್ಲಿ ಮಹಾ­ಮಂಡ­ಲದ ಆಶ್ರಯಲ್ಲಿ ಶುಕ್ರ­ವಾರ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಮಾತುಕತೆಗೆ ಆಹ್ವಾನಿಸಿದ ಕುಸುಗಲ್‌, ಬಹುತೇಕ ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ

‘ಬಸ್‌ಗಳ ಓಡಾಟ ಸಮಯಕ್ಕೆ ಸಂಬಂ­ಧಿ­ಸಿದಂತೆ ಫಾರ್ಮ್‌– 4ರಲ್ಲಿರುವ ಅವೈಜ್ಞಾನಿಕ ಅಂಶಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ವೆ ಮಾಡಿ ವಾಸ್ತವಕ್ಕೆ ಅನುಗುಣವಾಗಿ ಬದಲಾ­ವಣೆ ಮಾಡಲು 5 ಮಂದಿಯ ಸಮಿತಿ ರಚಿಸಲು ಕುಸುಗಲ್‌ ಒಪ್ಪಿದ್ದಾರೆ. ಸಮಿ­ತಿ­ಯಲ್ಲಿ ಆಡಳಿತ ಮಂಡಳಿ ಸದಸ್ಯರು ಮತ್ತು ಮಹಾಮಂಡಲದ ಇಬ್ಬರು ಸದಸ್ಯರು ಇರುತ್ತಾರೆ. 15 ದಿನಗಳ ಒಳಗೆ ಈ ಸಮಿತಿ ವರದಿ ನೀಡಲಿದ್ದು, ಬಳಿಕ ಈ ಬಗ್ಗೆ ಕ್ರಮ ತೆಗೆದುಕೊ­ಳ್ಳುವುದಾಗಿ ತಿಳಿಸಿದ್ದಾರೆ’

‘ಮೊಬೈಲ್‌ ಇಂದಿನ ದಿನಗಳಲ್ಲಿ ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಕರ್ತವ್ಯದ ಅವಧಿಯಲ್ಲಿ ಏನಾದರೂ ಸಮಸ್ಯೆ ಉಂಟಾದರೆ ತಕ್ಷಣ ಮನೆಯ­ವರನ್ನು ಸಂಪರ್ಕಿಸದಲು ಮೊಬೈಲ್‌ ಅಗತ್ಯವಾಗಿದೆ. ಹೀಗಾಗಿ ಕಂಡಕ್ಟರ್‌ಗಳು ಮೊಬೈಲ್‌ ಬಳಸಬಾರದಂತೆ ಹೊರಡಿ­ಸಿದ ಆದೇಶವನ್ನು ಹಿಂತೆಗೆದುಕೊ­ಳ್ಳು­ವಂತೆ ಮಹಾಮಂಡಲ ಇಟ್ಟಿದ್ದ ಬೇಡಿಕೆ­ಯನ್ನೂ ಈಡೇರಿಸುವುದಾಗಿ ಕುಸಗಲ್‌ ಒಪ್ಪಿದ್ದಾರೆ.
ಮಹಾಮಂಡಲದ ಮುಂದಿಟ್ಟ ವಿವಿಧ ಬೇಡಿಕೆಗಳ ಕುರಿತು ಸುಮಾರು ಮೂರು ಗಂಟೆ ಸೌಹಾ­ರ್ದಯುತವಾಗಿ ನಡೆದ ಮಾತುಕತೆ ಸಂದರ್ಭದಲ್ಲಿ ಕಾರ್ಮಿಕರ ಹೆಚ ಬಹುತೇಕ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಮುಖ್ಯ ಸಂಚಾರ ಪ್ರಬಂಧಕರು, ಮಹಾಮಂಡಲದ ಅಧ್ಯಕ್ಷ ಕೆ.ಎಸ್‌.ಶರ್ಮಾ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಮೂರ್ತಿ ಸಹಿತ ಎಲ್ಲ ಆರು ವಿಭಾಗಗಳ ಪ್ರತಿನಿಧಿಗಳು ಮಾತುಕತೆಯಲ್ಲಿ ಭಾಗವಹಿಸಿದ್ದರು’ ಎಂದು ಕಾಂಗೋ  ತಿಳಿಸಿದ್ದಾರೆ.

ಮಾತುಕತೆಗೂ ಮುನ್ನ ಗೋಕುಲ ರಸ್ತೆಯ ವಿಶ್ವಶ್ರಮ ಚೇತನದಿಂದ ಮೆರ­ವಣಿಗೆ ಹೊರಟು ಕೇಂದ್ರ ಕಚೇರಿಗೆ ಬಂದ ಪ್ರತಿಭಟನಕಾರರು, ಕಚೇರಿ ಮುಂಭಾಗ­ದಲ್ಲಿ ಧರಣಿ ಕುಳಿತು ಬೇಡಿಕೆಗಳನ್ನು ಈಡೇರಿಸುವಂತೆ ಘೋಷ­ಣೆಗಳನ್ನು ಕೂಗಿದರು. ಫಾರ್ಮ್‌– 4ರಲ್ಲಿರುವ ಕಾನೂ­ನುಬಾಹಿರ ಅಂಶಗಳನ್ನು ಸರಿಪಡಿ­ಸಬೇಕು, ರಜೆ ಮಂಜೂರಾತಿಯಲ್ಲಿನ ಅನ್ಯಾಯ, ತಾರತಮ್ಯ, ಕಿರುಕುಳ ಪರಿಹರಿಸಬೇಕು, ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಸಿಬ್ಬಂದಿ ಕೊರತೆ ನಿವಾ­ರಿಸಬೇಕು, ಮೊಬೈಲ್‌ ಬಳಕೆ ನಿಷೇಧ­ವನ್ನು ರದ್ದುಗೊಳಿಸಬೇಕು ಎಂದು ಪ್ರತಿಭ­ಟನೆಕಾರರು ಬೇಡಿಕೆ ಮುಂದಿಟ್ಟರು.

ಡಬಲ್‌ ಡ್ಯೂಟಿ, ಬಾರ್‌ ಡ್ಯೂಟಿ ರದ್ದಾಗಬೇಕು, ಡಿಪೋಗಳಲ್ಲಿ ಕುಡಿ­ಯುವ ನೀರು ಮತ್ತಿತರ ಮೂಲಸೌ­ಲಭ್ಯಗಳನ್ನು ಒದಗಿಸಬೇಕು, ಮಹಿಳೆ­ಯರು ಮತ್ತು ಪುರುಷರಿಗೆ ಪ್ರತ್ಯೇಕ ವಿಶ್ರಾಂತಿ ಗೃಹಗಳನ್ನು ಒದಗಿಸಬೇಕು, ರಾತ್ರಿ ತಂಗಬೇಕಾದ ಸಂದರ್ಭದಲ್ಲಿ ಸಿಬ್ಬಂದಿಗೆ ರೆಸ್ಟ್‌ ಹೌಸ್‌ ಒದಗಿಸಬೇಕು, ಭವಿಷ್ಯನಿಧಿಯ ಬಾಕಿ­ಯನ್ನು ತಕ್ಷಣ ತುಂಬಬೇಕು, ಮಹಿಳೆ­ಯರಿಗೆ ಜನರಲ್‌ ಶಿಫ್ಟ್‌ನಲ್ಲಿ ಮಾತ್ರ ಕೆಲಸ ಕೊಡಬೇಕು, ಕೆಲಸದ ಜಾಗದಲ್ಲಿ ಮಹಿಳೆಯರಿಗೆ ಕಿರುಕುಳ ಆಗದಂತೆ ತಡೆಯಬೇಕು, ಹುಬ್ಬಳ್ಳಿಯ ಪ್ರಾದೇಶಿಕ ಕಾರ್ಯಾ­ಗಾರದಲ್ಲಿ ಹೊಸ ಬಾಡಿ­ಬಿಲ್ಡಿಂಗ್‌ ಕೆಲಸ ಹೆಚ್ಚಿಸಬೇಕು ಮತ್ತಿತರ 23 ಬೇಡಿಕೆ­ಗಳನ್ನು ಈಡೇರಿಸುವಂತೆ ಪ್ರತಿಭಟನ­ಕಾರರು ಆಗ್ರಹಿಸಿದರು.

ಮಹಾಮಂಡಲದ ಮುಖ್ಯ ಉಪಾ­ಧ್ಯಕ್ಷ ಎನ್‌.ಆರ್‌. ಕಾನಗೋ, ಪ್ರಧಾನ ಕಾರ್ಯದ್ರಶಿ ಪ್ರಕಾಶ ಮೂರ್ತಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಚಿಕ್ಕೋಡಿ, ಗದಗ, ಹಾವೇರಿ, ಶಿರಸಿ, ಕೇಂದ್ರ ಕಚೇರಿ ಹಾಗೂ ಹುಬ್ಬಳ್ಳಿ ಪ್ರಾದೇಶಿಕ ಕಾರ್ಯಾಗಾರದ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT