ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಮತ್ತೆ 6 ಕೆ.ಜಿ. ಗಾಂಜಾ ವಶ

ಹುಬ್ಬಳ್ಳಿಯಲ್ಲಿ ಮುಂದುವರಿದ ಪೊಲೀಸ್‌ ಕಾರ್ಯಾಚರಣೆ
Last Updated 13 ಸೆಪ್ಟೆಂಬರ್ 2020, 16:39 IST
ಅಕ್ಷರ ಗಾತ್ರ

ಹುಬ್ಬಳ್ಳಿ:ಗಾಂಜಾ ಸಾಗಾಟ ಮತ್ತು ಮಾರಾಟದಲ್ಲಿ ತೊಡಗಿದ್ದವರ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ನಗರದ ಪೊಲೀಸರು ಮತ್ತೆ ಇಬ್ಬರನ್ನು ಬಂಧಿಸಿದ್ದು, ₹1.2 ಲಕ್ಷ ಮೌಲ್ಯದಆರು ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಪ್ರಕರಣ ಬಯಲಾಗುತ್ತಿದ್ದಂತೆ ಇಲ್ಲಿನ ಪೊಲೀಸರು ಚುರುಕಾಗಿದ್ದಾರೆ. ಶನಿವಾರ ನಗರದ ಕೇಶ್ವಾಪುರದಿಂದ ಘಂಟಿಕೇರಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ 21 ವರ್ಷದ ಸುಮೇರಸಿಂಗ್‌ ಮದನಸಿಂಗ್‌ ಮತ್ತು ಸಮುಂದರ ಸಿಂಗ್‌ ನೇಪಾಲಸಿಂಗ್‌ ಬಂಧಿತರು. ಕೇಶ್ವಾಪುರದ ಆಜಾದ್‌ ಕಾಲೊನಿಯಲ್ಲಿ ವಾಸವಿದ್ದ ಸಮುಂದರ ಸಿಂಗ್‌ ಎಲೆಕ್ಟ್ರಿಕಲ್‌ ಕೆಲಸ ಮಾಡುತ್ತಿದ್ದ.ಆರೋಪಿಗಳಿಂದ ಒಂದು ದ್ವಿಚಕ್ರ ವಾಹನ, ₹420 ವಶಪಡಿಸಿಕೊಳ್ಳಲಾಗಿದೆ ಎಂದು ‍ಪೊಲೀಸರು ತಿಳಿಸಿದ್ದಾರೆ.

ಮನಕ್ಕಾ ಮಾರಾಟ: ದಾಳಿ

ಹುಬ್ಬಳ್ಳಿಯ ರಾಧಾಕೃಷ್ಣ ಗಲ್ಲಿಯಲ್ಲಿರುವ ಪಾಶ್ವನಾಥ ಒಣಹಣ್ಣುಗಳ (ಡ್ರೈ ಫ್ರೂಟ್ಸ್‌) ಹೆಸರಿನಅಂಗಡಿಯಲ್ಲಿ ನಶೆ ಬರುವ ಮನಕ್ಕಾ ವಸ್ತುವನ್ನು ಮಾರಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆಈ ಅಂಗಡಿ ಮೇಲೆಭಾನುವಾರ ದಾಳಿ ಮಾಡಿದ ಘಂಟಿಕೇರಿ ಪೊಲೀಸರು ಇಬ್ಬರನ್ನುಬಂಧಿಸಿದ್ದಾರೆ.

ಶೀಲವಂತರ ಓಣಿಯ ಮುಕೇಶ ಜೈನ್‌ ಹಾಗೂ ಕಮಲೇಶ ಜೈನ್ ಬಂಧಿತರು. ಇವರಿಂದ1,220 ಗ್ರಾಂ ತೂಕದ ಅಕ್ಕಿ ಮತ್ತು 360 ಮನಕ್ಕಾ ಪಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾದಕ ವಸ್ತು ಪತ್ತೆ

ಸಿಬಿಟಿಯ ಕಿಲ್ಲಾ ಹತ್ತಿರದ ಬ್ರಾಡ್‌ ವೇ ಕಾಂಪ್ಲೆಕ್ಸ್‌ನ ಓಸಿಯಾ ಮಾರ್ಕೆಟಿಂಗ್‌ ಅಂಗಡಿಯಲ್ಲಿ ಆಯುರ್ವೇದ ಔಷಧಿ ಎಂದು ಮಾರಾಟ ಮಾಡುತ್ತಿದ್ದ ಮಾದಕ ವಸ್ತು 60 ಕೆ.ಜಿ. ಮಧುಮನಕ್ಕಾವನ್ನು ಹುಬ್ಬಳ್ಳಿ–ಧಾರವಾಡ ನಗರ ಆರ್ಥಿಕ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದು ₹30 ಸಾವಿರ ಮೌಲ್ಯ ಹೊಂದಿದೆ.

38 ವರ್ಷದ ಪುಷ್ಪರಾಜ್‌ ಮೆಹತಾ, 30 ವರ್ಷದ ಗಣೇಶಪೇಟೆಯ ಉಮೇಶ ಸವಣೂರ ಬಂಧಿತರು.

ಚಿನ್ನದಂಗಡಿಯಲ್ಲಿ ಕಳ್ಳತನ: ಇಬ್ಬರ ಬಂಧನ

ಹುಬ್ಬಳ್ಳಿನಗರದ ರೈಲು ನಿಲ್ದಾಣ ರಸ್ತೆಯ ಕಲ್ಯಾಣ ಜ್ಯುವೆಲರ್ಸ್‌‌ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ವಿಜಯನಗರದ ವಿರಕ್ತಾನಂದ ಕಟಕಿ ಮತ್ತು ಗದುಗಿನ ಕಲಾಮಂದಿರ ರಸ್ತೆಯ ನಿವಾಸಿ ಶರತ್‌ ಕಾರಂತ ಬಂಧಿತರು. ಇವರು ಗ್ರಾಹಕರ ಸೋಗಿನಲ್ಲಿ ಹುಬ್ಬಳ್ಳಿ, ಬೆಳಗಾವಿ ಮತ್ತು ದಾವಣಗೆರೆಯ ಕಲ್ಯಾಣ ಜ್ಯುವೇಲರ್ಸ್‌ನಲ್ಲಿ ಕಳ್ಳತನ ಮಾಡಿದ ಆರೋಪ ಎದುರಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವರಿಂದ₹ 8.27 ಲಕ್ಷ ಮೌಲ್ಯದ 130 ಗ್ರಾಂತೂಕದ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೊಬ್ಬ ಆರೋಪಿಯ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಆರೋಪಿಗಳು ಇಲ್ಲಿನ ಕಲ್ಯಾಣ ಜ್ಯುವೆಲರ್ಸ್‌ನಲ್ಲಿ ₹ 3.98 ಲಕ್ಷ ಮೌಲ್ಯದ 59 ಗ್ರಾಂ ಆಭರಣ ಕಳವು ಮಾಡಿ, ಪರಾರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT