ರಾಜಸ್ಥಾನ ಮೂಲದ ಹಾಲಿ ಬಾಗಲಕೋಟೆಯ ಟಾಂಗಾ ನಿಲ್ದಾಣದ ಭವಾನಿ ಟೀ ಸ್ಟಾಲ್ ಸನಿಹದ ನಿವಾಸಿ ಗೋಕುಲರಾಮ ರಬಾರಿ ಬಂಧಿತ ವ್ಯಕ್ತಿ. ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದ ತಂಡ ಶುಕ್ರವಾರ ತಡರಾತ್ರಿ ನಗರದ ಕುಸಗಲ್ ರಸ್ತೆಯ ಆಕ್ಸ್ಫರ್ಡ್ ಕಾಲೇಜು ಬಳಿ ಕಾರು ತಡೆದು ತಪಾಸಣೆ ನಡೆಸಿದೆ. ಆ ವೇಳೆ ₹82,72,500 ನಗದು ದೊರೆತಿದೆ. ಹಣಕ್ಕೆ ಸಂಬಂಧಿಸಿ ಚಾಲಕ ಗೋಕುಲರಾಮನನ್ನು ವಿಚಾರಿಸಿದಾಗ ಸರಿಯಾದ ಉತ್ತರ ನೀಡದೆ, ದಾಖಲೆಗಳನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.