ಕರ್ನಾಟಕ ರಾಜ್ಯ ಶಿಕ್ಷಣಸಂಸ್ಥೆಗಳ ನೌಕರರ ಸಂಘದ ಕೋಶಾಧ್ಯಕ್ಷರೂ ಆದ ಪಾಟೀಲ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಅ. 16ರಂದು ಜೆಡಿಎಸ್ ಮುಖಂಡ ಗಜಾನನ ಅಣ್ವೇಕರ ಹಾಗೂ ಇನ್ನಿಬ್ಬರು ಹಿಂಬಾಲಿಸಿಕೊಂಡು ಮನೆಗೆ ಬಂದು ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ. ಮೊಬೈಲ್ ಕಸಿದುಕೊಂಡು ಹೊರಟ್ಟಿ ಅವರ ವಿರುದ್ಧ ಸಂಘ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದೀಯಾ, ನಿನ್ನನ್ನು ಜೀವ ಸಹಿತಬಿಡುವುದಿಲ್ಲವೆಂದು ಬೆದರಿಕೆ ಒಡ್ಡಿದ್ದಾರೆ’ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಕಣ್ಣೀರು ಸುರಿಸಿದರು. ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.