ಧಾರವಾಡ: ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹಾಗೂ ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ ಅವರ ತಲೆ ಕಡಿದವರಿಗೆ ₹10 ಲಕ್ಷ ಕೊಡುವುದಾಗಿ ಫೇಸ್ಬುಕ್ನಲ್ಲಿ ಪೋಸ್ಟ್ ಹರಿದಾಡುತ್ತಿದೆ. ಇದ ರೊಂದಿಗೆ, ಎರಡು ಬೆದರಿಕೆ ಕರೆಗಳು ಬಂದಿವೆ ಎಂದು ಮುತಾಲಿಕ್ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಪ್ರಮೋದ ಮುತಾಲಿಕ್, ‘ದೇವಾಲಯಗಳ ರಕ್ಷಣೆ ಹಾಗೂ ಹಿಂದೂಗಳ ಪರವಾಗಿ ಧ್ವನಿ ಎತ್ತಿರುವುದಕ್ಕೆ ಎರಡು ಬೆದರಿಕೆ ಕರೆಗಳು ಬಂದಿವೆ. ಇಂಥ ಬೆದರಿಕೆಗೆ ಬಗ್ಗಲ್ಲ. ಹಿಂದೆಯೂ ಇಂಥ ಕರೆಗಳು ಬಂದಿದ್ದವು. ಗುರುವಾರ ಕಮಿಷನರ್ ಕಚೇರಿಗೆ ದೂರು ನೀಡಲಾಗುವುದು’ ಎಂದರು.
‘ಮೊದಲು ಕೋರ್ಟ್ ಆದೇಶ ಪಾಲಿಸಿ, ದೇವಸ್ಥಾನ ಕೆಡವಿ ಮಸೀದಿ ಕಟ್ಟಿದ್ದನ್ನು ವಾಪಸ್ ಕೊಡಿ. ನಮ್ಮ ದೇಶ ಭಕ್ತಿಯ ಕಾರ್ಯವನ್ನು ಇನ್ನೂ ಪ್ರಖರ ವಾಗಿ ಹಾಗೂ ಗಟ್ಟಿಯಾಗಿ ಮಾಡುತ್ತೇವೆ. ತಾಕತ್ತಿದ್ದರೆ ತಡೆದು ನೋಡಿ’ ಎಂದರು.