ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಬಿ ಅಭಿಮಾನಿಗಳಿಂದ ನುಗ್ಗಿಕೇರಿ ಹನುಮಂತ ದೇವರಿಗೆ ಅಭಿಷೇಕ

Last Updated 10 ಅಕ್ಟೋಬರ್ 2020, 14:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಈ ಸಲದ ಐಪಿಎಲ್‌ ಕ್ರಿಕೆಟ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಟ್ರೋಫಿ ಗೆಲ್ಲಬೇಕು ಎಂದು ಪ್ರಾರ್ಥಿಸಿ ತಂಡದ ಅಭಿಮಾನಿಗಳು ಶನಿವಾರ ಧಾರವಾಡದ ಪ್ರಸಿದ್ಧ ನುಗ್ಗಿಕೇರಿ ಹನುಮಂತ ದೇವರಿಗೆ ಅಭಿಷೇಕ ಮಾಡಿಸಿದ್ದಾರೆ.

ಅಭಿಮಾನಿಗಳು ಅಭಿಷೇಕದ ರಸೀತಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಎಂದು ಬರೆಸಿದ್ದು, ರಾಶಿ ‘ವಿರಾಟ್‌’, ಗೋತ್ರ ‘ಎಬಿಡಿ’ ಎಂದು ಬರೆಯಿಸಿದ್ದಾರೆ. ಈ ರಸೀತಿ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು ಅನೇಕರು ಮೆಚ್ಚಿಕೊಂಡಿದ್ದಾರೆ. ‘ಇದು ಕಣ್ರೊ ಆರ್‌ಸಿಬಿ ಕ್ರೇಜ್‌ ಅಂದ್ರೆ’ ಎನ್ನುವ ಮೆಚ್ಚುಗೆಯ ಸಂದೇಶ ಹರಿದಾಡುತ್ತಿವೆ. ಅಭಿಷೇಕ ಮಾಡಿರುವುದನ್ನು ದೇವಸ್ಥಾನದ ಅರ್ಚಕರು ಕೂಡ ಖಚಿತಪಡಿಸಿದ್ದಾರೆ.

ಅಭಿಷೇಕದ ರಸೀತಿ ಜೊತೆ ‘ಒಂದೆರೆಡು ಮ್ಯಾಚ್‌ಗಳನ್ನು ಸೋತ ತಕ್ಷಣ ಮನೆಯವರಿಗೆಲ್ಲ ಬೆದರಿಕೆ ಹಾಕೊ ಫ್ಯಾನ್ಸ್‌ ನಾವಲ್ಲ. 12 ವರ್ಷ ಆದ್ರೂ ಅದೇ ಪ್ರೀತಿ ಇಟ್ಕೊಂಡಿರೊ ರಾಯಲ್‌ ಫ್ಯಾನ್ಸ್‌’ ಎನ್ನುವ ಸಂದೇಶ ಬರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT