ಹಳೇಹುಬ್ಬಳ್ಳಿ ಪೊಲೀಸ್ ಕಸ್ಟಡಿಯಲ್ಲಿದ್ದ ಶಿಮ್ಲಾನಗರದ ಆರೀಫ್, ಅಲ್ಲಿದ್ದ ಸಿಬ್ಬಂದಿಗೆ ಟರ್ಪಂಟೇಲ್ ನೀಡುವಂತೆ ವಿನಂತಿಸಿದ್ದಾನೆ. ಗಾಯಕ್ಕೆ ಹಚ್ಚಲು ಕೇಳಿರಬಹುದು ಎಂದು ಸಿಬ್ಬಂದಿ ಅದರ ಬಾಟಲ್ ನೀಡಿದ್ದಾರೆ. ಅದನ್ನು ಪಡೆದ ಮಹ್ಮದ್ ಆರೀಫ್ ತಕ್ಷಣ ಕುಡಿದಿದ್ದಾನೆ. ಅಲ್ಲಿಯೇ ಇದ್ದ ಮತ್ತೊಬ್ಬ ಆರೋಪಿ ಎಐಎಂಐಎಂ ಮುಖಂಡ ನಸೀರ್'ಅಹ್ಮದ್ ಹೊನ್ಯಾಳ ಅದನ್ನು ನೋಡಿ, ಬಾಟಲಿ ಕೆಡವಿದ್ದಾನೆ. ಕೆಲ ಸಮಯದಲ್ಲಿಯೇ ಆರೀಫ್'ಗೆ ಪ್ರಜ್ಞೆ ತಪ್ಪಿದೆ.